ಸ್ಥಳನಾಮ, ವ್ಯಕ್ತಿನಾಮ ಇತ್ಯಾದಿ ದಾಖಲು ಸಾಹಿತ್ಯದ ಅಧ್ಯಯನಗಳು
ಶಾಸನಗಳ ವಸ್ತು ವಿಮರ್ಶೆ, ಸ್ಥಳನಾಮಗಳು, ವ್ಯಕ್ತಿನಾಮಗಳು, ಕಡತಗಳು, ಕೈಫಿಯತ್ತುಗಳು, ನಿರೂಪಗಳು, ಭಕೈರು, ದಿನಚರಿಗಳು, ನಾಮೆ, ಭಿನ್ನವತ್ತಳೆ, ಸ್ಮಾರಕಗಳು ಪುರಾತತ್ವ ಶೋಧಗಳು, ಸಮಾಧಿಗಳು, ಬೃಹತ್ ಶಿಲಾಯುಗದ ಸಮಾಧಿಗಳು ಐತಿಹ್ಯಗಳು ಇವೆಲ್ಲಾ ಒಂದೊಂದೂ ಪ್ರತ್ಯೇಕ ಅಧ್ಯಯನಗಳು. ಇವುಗಳನ್ನು ಸಾಂಸ್ಕೃತಿಕ ಚರಿತ್ರೆಯ ಸಂರಚನೆಯ ಸಂದರ್ಭದಲ್ಲಿ ಆಕರವಾಗಿ ಬಳಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ಈ ಕ್ಷೇತ್ರದಲ್ಲಿ ಬಿಡಿ ಬಿಡಿ ಲೇಖನಗಳನ್ನು, ಪ್ರಸ್ತಾಪಗಳನ್ನೂ ಹೊರತುಪಡಿಸಿದರೆ ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ಯುವ ವಿದ್ವಾಂಸರೂ, ಸಂಶೋಧಕರೂ ಆಸಕ್ತಿ ವಹಿಸಿದರೆ ಹತ್ತಾರು ಅವಕಾಶಗಳು ಅವರಿಗಾಗಿಯೇ ಇವೆ.
ಸ್ಥಳನಾಮಗಳು ಮತ್ತು ವ್ಯಕ್ತಿನಾಮಗಳು ಈಗ ಭಾಷಾವಿಜ್ಞಾನದ ಭಾಗವಾಗಿರುವುದು ಸತ್ಯವಾದರೂ ಐತಿಹಾಸಿಕ ಹಾಗೂ ಜಾನಪದದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ಬಹಳಷ್ಟು ಶಾಸನಗಳು, ಐತಿಹ್ಯಗಳು ಜನಪದ ಕಥನಗಳು ಆಕರಗಳಾಗಿ ಸಿಗುತ್ತವೆ. ಊರುಗಳ ಹೆಸರು, ನಗರ, ಪಟ್ಟಣ, ಅಗ್ರಹಾರ, ದೇವಾಲಯ ನಿರ್ಮಾಣ. ಅವುಗಳ ಹೆಸರುಗಳನ್ನು ಚಾರಿತ್ರಿಕವಾಗಿ, ಅವುಗಳ ಸೃಷ್ಟಿಕಾರಣ, ಹಿನ್ನೆಲೆ, ಘಟನೆ, ಅದರ ಭೌಗೋಳಿಕತೆ, ಗಡಿರೇಖೆಗಳು, ಅಲ್ಲಿ ವಾಸಿಸುತ್ತಿದ್ದ ಜನಸಮುದಾಯ ಮುಂತಾದವುಗಳನ್ನು ಸಂಶೋಧನೆ ಮಾಡಬೇಕಿದೆ. ಅನೇಕ ಸ್ಥಳನಾಮಗಳು ರಾಜರ ಸೋಲು ಗೆಲುವಿನೊಂದಿಗೆ ಬದಲಾಗುತ್ತಿದ್ದವು ಎಂಬುದನ್ನು ಮರೆಯುವಂತಿಲ್ಲ.
ಇವುಗಳನ್ನು ಅಧ್ಯಯನದ ಅನುಕೂಲಕ್ಕಾಗಿ, ರಾಜಮನೆತನ, ಪ್ರಾದೇಶಿಕ, ಕಾಲಘಟ್ಟ, ಧಾರ್ಮಿಕ ಹಿನ್ನೆಲೆ, ರಾಜಕೀಯ ಕಾರಣಗಳು ಹೀಗೆ ವಿಭಾಗ ಮಾಡಿಕೊಂಡು ಅಧ್ಯಯನ, ಸಂಶೋಧನೆ ಮಾಡಲು ಅವಕಾಸವಿದೆ.ಆಶಾಮೂರ್ತಿಶ್ರಾವಣ ಮಾಸದ ಪ್ರಾತಃಕಾಲದಲಿ ಕೊಟಡಿಯಲಿ ಕುಳಿತಾನು ಲೋಕದ ಶೋಕದ ಚಿಂತೆಯಲಿ ಮುಳುಗಿ ಮರುಗುತಿದ್ದೆ.ಮುಂದೆ ಗತಿ ಏನೆಂದು ನಿರಾಶೆಯಲಿ ಕೊರಗುತಿದ್ದೆ.
ಸತ್ಯ ಧರ್ಮಗಳಿಗೆ ಸಲಸಲವೂ ಬಂದೊದಗುವ ಪರಾಜಯವನು ಕುರಿತು,ರಾಷ್ಟ್ರ ರಾಷ್ಟ್ರಗಳ ಪರಸ್ಪರ ದ್ವೇಷಾಸೂಯೆಗಳನು ಕುರಿತು,ಶಾಂತಿಸಂಧಾನಗಳ ಹಿಂದೆ ಹುದುಗಿ ಕಣ್ಣು ಮಿಟುಕಿಸುತಿರುವ ಕ್ರಾಂತಿ ಸಮರಗಳ ದುರಭಿಸಂಧಿಯನು ಕುರಿತು,ಗೆದ್ದವರು ಸೋತವರ ಮೇಲೆ ನಡೆಸುತ್ತಿರುವ ಅತ್ಯಾಚಾರಗಳನು ಕುರಿತು,ಜೀವನದ ನೂರಾರು ದುರ್ಭೇದ್ಯ ಸಮಸ್ಯೆಗಳನು ಕುರಿತು,ಮುಂದೆ ಗತಿ ಏನೆಂದು ನಿರಾಶೆಯಲಿ ಕೊರಗುತಿದ್ದೆ.
ಇದ್ದಕಿದ್ದಂತೆ ನಿಡುಸುಯ್ದು ಮೇಲೆದ್ದೆ.ಗವಾಕ್ಷದಾಚೆಗೆ ದೃಷ್ಟಿಯನಟ್ಟಿ ನೋಡಲು, ಅಲ್ಲಿ ಯಾವ ಶೋಕದ ಛಾಯೆಯೂ ಕಾಣಿಸಲಿಲ್ಲ. ಎಲ್ಲವೂ ಸುಖ ಶಾಂತಿ ಪೂರ್ಣವಾಗಿತ್ತು.ನನ್ನ ಚಿಂತೆಗೆ ನಾನೆ ನಾಚಿದೆ.ಹೊರಗೆ ಹಸುರು ಬಯಲಿನಲಿ ಇಬ್ಬನಿಗಳ ಮೇಲೆ ಎಳಬಿಸಿಲು ಮುದ್ದಾಗಿ ಮಲಗಿತ್ತು.
ಹೂದೋಟದಲಿ ಗುಬ್ಬಚ್ಚಿಗಳ ಗಾನ ನಿಶ್ಚಿಂತವಾಗಿತ್ತು; ನಿರುದ್ವಿಗ್ನವಾಗಿತ್ತು; ಆನಂದವಾಗಿತ್ತು.
ಕುಸುಮಗಳು ನನ್ನನು ನೋಡಿ ನಗುತಿದ್ದುವು.ದೂರದಲಿ, ಮರಗಿಡಗಳಲ್ಲಲ್ಲಿ ತುಂಬಿದ್ದ ಹಸುರು ಹೊಲಗಳ ನಡುವೆ, ಚಲಿಸುತಿದ್ದುವು ಬಿಳಿಯ ಚುಕ್ಕಿಗಳೆರಡು!ಆ ಬಿಳಿಯ ಚುಕ್ಕಿಗಳ ಹಿಂದುಗಡೆ ಕರಿಯ ಚುಕ್ಕಿಯದೊಂದು ಚಲಿಸುತ್ತಿತ್ತು!ಬಿಳಿಯ ಚುಕ್ಕಿಗಳೆರಡು ಬಿಳಿಯ ಎತ್ತುಗಳು! ನೇಗಿಲನು ಕೈಲಾಂತ ಒಕ್ಕಲಿಗನೆ ಕರಿಯ ಚುಕ್ಕಿ!ತೂರಿಹೋದುವು ನನ್ನ ಚಿಂತೆಗಳೆಲ್ಲ; ಮಾಯವಾಯಿತು ನನ್ನ ನಿರಾಶೆ!
ಏನೆ ಆಗಲಿ ಜಗಕೆ, ನೀನಿರುವ ಪರ್ಯಂತ ನಮಗೆ ಕೇಡಿಲ್ಲ! ನಿನ್ನ ದರ್ಶನದಿಂದ ನಮ್ಮೆಲ್ಲ ನಿರಾಶೆಗಳೂ ಸಿಡಿದೊಡೆಯುವುವು, ನೀರ ಮೇಲಣ ಗುಳ್ಳೆಗಳಂತೆ!
ರೆಡ್ಡಿ
ರೆಡ್ಡಿ, ಕಾಪು, ಕಾಪುಲುಗಳು ಕೋಲಾರ, ಬಳ್ಳಾರಿ, ರಾಯಚೂರು, ಗುಲ್ಬರ್ಗಾ ಮತ್ತು ಬೀದರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಬೆಂಗಳೂರು ಜಿಲ್ಲೆಯ ದಕ್ಷಿಣ ಭಾಗಗಳಲ್ಲಿ ತುಮಕೂರು ಮತ್ತು ಕೋಲಾರಗಳಲ್ಲಿ ಬಹಳ ಹಿಂದಿನಿಂದಲೂ ಇದ್ದಾರೆ. ಇವರ ಮಾತೃಭಾಷೆ ತೆಲುಗಿನೊಂದಿಗೆ ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈವರಲ್ಲಿ ಮುಖ್ಯವಾಗಿ ಸುನಾಪುಲು, ಪಸುಪಾಲು ಮತ್ತು ಪಗಡದ ಪಾಲುಗಳೆಂಬ ಬೆಡಗುಗಳು ಇವೆ. ಇವರ ಮೌಖಿಕ ಪರಂಪರೆಯು, ಇವರ ಪೂರ್ವಜರು ಸುಮಾರು ನೂರೈವತ್ತು ವರ್ಷಗಳ ಹಿಂದೆ ಗುಂಟೂರಿನಿಂದ ಮೂರು ಜನ ಸಹೋದರರು ವಲಸೆ ಬಂದರು. ಒಂದು ಕಾಲದಲ್ಲಿ ಇವರು ನೇಗಿಲಮನೆ, ಬಿಲ್ಲೆಮನೆ, ಉರಗ ನೆಟ್ಟಿಮನೆ, ನಡವಿಲಮನೆ ಇತ್ಯಾದಿ ಬೆಡಗುಗಳನ್ನು ಹೊಂದಿದ್ದರಾದರೂ, ಈಗ ಅವು ಅಸ್ತಿತ್ವದಲ್ಲಿಲ್ಲ. ಸೋದರ-ಸಂಬಂಧಿಗಳಲ್ಲಿ ವಿವಾಹಕ್ಕೆ ಅನುಮತಿ ಇದೆ. ವಿಧುರ, ವಿಧವೆಯರ ವಿವಾಹಕ್ಕೆ ಅವಕಾಶವಿದೆ. ಆಸ್ತಿಯನ್ನು ಗಂಡು ಮಕ್ಕಳಿಗೆ ಸಮನಾಗಿ ಹಂಚಲಾಗುತ್ತದೆ. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ.
ಇವರ ಪ್ರಮುಖ ಸಾಂಪ್ರದಾಯಿಕ ವೃತ್ತಿ ವ್ಯವಸಾಯ, ಕೆಲವರು ಅನೇಕ ರೀತಿಯ ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ,ಇತ್ಯಾದಿ ವೃತ್ತಿಗಳಲ್ಲಿ ನಿರತರಾಗಿದ್ದಾರೆ. ವೆಂಕಟರಮಣ, ಭಾಮಸೇಂದ್ರ, ಮಲ್ಲಯ್ಯ ಇವರ ಪ್ರಮುಖ ದೈವಗಳಾಗಿವೆ. ಈ ಸಮುದಾಯವು ರಾಷ್ಟ್ರ ಹಾಗೂ ಪ್ರಾದೇಶಿಕ ಮಟ್ಟದ ರಾಜಕೀಯ ನಾಯಕರನ್ನು ಹೊಂದಿದೆ. ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಇವರು ಬಳಸಿಕೊಂಡಿದ್ದಾರೆ.
No comments:
Post a Comment