ಹಾಕಮ್ಮ ಗಂಟು
ಅಜ್ಜಿ : ಏ ಕಿಟ್ಟೀ, ಏಳೊ ಮೇಲೇಳೊ. ಏಳೊ ಅಂದರೆ ಏಳಬೇಕು. ಸ್ಕೂಲಿಗೆ ಹೊತ್ತಾಗೋಯ್ತು. ಏಳೋ ಅಂದ್ರೆ.
ಭಾಗವತ : (ಆಗಮಿಸಿ) ಇದೇನು? ನಾನು ಬರೋದರೊಳಗೇ ನಾಟಕ ಸುರುವಾಗಿ ಬಿಟ್ಟದೆ! ಯಾರು ಈ ಮುದುಕಮ್ಮ? ಯಾರನ್ನ ಎಬ್ಬಿಸ್ತಿದಾಳೆ? ಏ ಏ ಮುದುಕಮ್ಮ, ತಡಿ ತಡಿ. ಏನಿದು? ನಾನು ಬರೋದರೊಳಗೇ ನಾಟಕ ಸುರು ಮಾಡೋದೆ? ಹೇಳಿಲ್ಲಾ ನಿನಗೆ? ಶಾಸ್ತ್ರದ ಪ್ರಕಾರ ನಾಟಕ ಸುರುವಾಗಬೇಕು. ಆಮೇಲೆ ನಿನ್ನ ಪ್ರವೇಶ ಅಂತ? ಈ ಮುದಿಕೇರ ಹಣೇಬರಾನೇ ಇಷ್ಟು. ಈಗ ಮೊದಲು ನನ್ನ ಮಾತಿದೆ. ಸ್ವಲ್ಪ ಆಚೆ ಹೋಗ್ತೀಯಾ?
ಅಜ್ಜಿ : ಯಾರೋ ತಮ್ಮಾ ನೀನು?
ಭಾಗವತ : ನಾನು ಯಾರು? ಇದೊಳ್ಳೆದಾಯ್ತಲ್ಲ, ನಾನು ಭಾಗವತ. ರಂಗದ ಮೇಲೆ ನಿಮ್ಮಂಥವರು ಬರ್ತೀರಲ್ಲ: ನಿಮ್ಮನ್ನ ಈ ಪ್ರೇಕ್ಷಕರಿಗೆ ಪರಿಚಯ ಮಾಡಿಸಬೇಕು. ನಮ್ಮ ಆಟದ ವಿಷಯ ಹೇಳಬೇಕು. ಅದು ಬಿಟ್ಟು ಯಾರಂತ ನನ್ನೇ ಕೇಳ್ತಿದ್ದೀಯಾ! ಬಲೇ ಮುದುಕಿ ನೀನು! ಸ್ವಲ್ಪ ಆಚೆ ಹೋಗ್ತೀಯಾ?
ಅಜ್ಜಿ : ಯಾವನಯ್ಯಾ ನೀನು? ನನ್ನ ಮನೆ, ನನ್ನ ಮೊಮ್ಮಗ, ನನ್ನ ಮಾತು. ನನಗೇ ಆಚೆ ಹೋಗಂತೀಯಾ. ನನ್ನ ಯಜಮಾನ ಕೂಡ ಹಾಗ್ಹೇಳಲಿಲ್ಲ.
ಭಾಗವತ : ಓಹೋ! ಈ ಪಾತ್ರಗಳಿಗೆಲ್ಲಾ ಆಗಲೇ ಜೀವ ಬಂದುಬಿಟ್ಟಿದೆ. ಇವನ್ನೀಗ ಕಂಟ್ರೋಲ್ ಮಾಡೋದೇ ಕಷ್ಟ. ಆಯ್ತಮ್ಮಾ ನಾನು ಭಾಷಣಾ ಮಾಡೋ ದಿಲ್ಲ, ಒಂದೆರಡು ಮಾತು ಹೇಳ್ತೇನೆ. ಸ್ವಲ್ಪ ತೆಪ್ಪಗಿರ್ತೀಯಾ?
ಅಜ್ಜಿ : ಅದೇನೊ ಬೇಗನೆ ಮುಗಸು. ನಾನು ಇಷ್ಟರಲ್ಲೇ ಬರತೇನೆ.
(ಹೋಗುವಳು)
ಭಾಗವತ : ಪ್ರೇಕ್ಷಕ ಮಕ್ಕಳಲ್ಲಿ ವಿಜ್ಞಾಪನೆ. ಈ ಹೊತ್ತು ನಾವು ಆಡೋ ಆಟ ಕಿಟ್ಟೀ ಕಥೆ. ಕಿಟ್ಟಿ ನಿಮ್ಮ ಹಾಗೇ ಒಬ್ಬ ಹುಡುಗ. ವಯಸ್ಸು ಎಷ್ಟೋ ಇರಬಹುದು. ಮದುವೆ ವಯಸ್ಸಂತೂ ಖಂಡಿತ ಅಲ್ಲ, ಬೇಕಾದರೆ ನೀವೇ ನೋಡಿ-ಎಲ್ಲಿ ಕಿಟ್ಟೀ? ಕಿಟ್ಟೀ, ಏ ಕಿಟ್ಟೀ-
ಕಿಟ್ಟಿ : (ಮಲಗಿಕೊಂಡೇ) ಏನು ಭಾಗವತರೇ?
ಭಾಗವತ : ಅಪ್ಪಾ, ನೀನು ನಮ್ಮ ಕಥಾನಾಯಕ. ಆಟದ ಆರಂಭದಲ್ಲಿ ನಮ್ಮ ಪ್ರೇಕ್ಷಕರಿಗೆ ನಿನ್ನ ಪರಿಚಯ ಮಾಡಿಕೊಡಬೇಕು. ಈಚೆ ಬರತೀಯಾ?
ಕಿಟ್ಟಿ : ನಮ್ಮ ಜ್ಜಿ ಇಲ್ಲ ತಾನೆ?
ಭಾಗವತ : ಯಾಕೆ ಹೆದರಿದೆಯಾ?
ಕಿಟ್ಟಿ : (ಎದ್ದು ಬಂದು) ಹೆದರಲಿಲ್ಲ ಭಾಗವತರೇ, ರೇಗಿಕೊಂಡು ಎದ್ದು ಬಂದೆ!
ಭಾಗವತ : ರೇಗಿಕೊಂಡು? ಆಯರ ಮೇಲೆ?
ಕಿಟ್ಟಿ : ನಿಮ್ಮ ಮೇಲೆ.
ಭಾಗವತ : ನನ್ನ ಮೇಲೆ? ಅದ್ಯಾಕಪ್ಪ?
ಕಿಟ್ಟಿ : ನನ್ನ ಮದುವೆ ಮಾಡಬಾರದು ಅಂತಲಾ ನಿಮ್ಮ ಅಭಿಪ್ರಾಯ?
ಭಾಗವತ : ಛೇ ಛೇ, ನಾನೂ ಗಂಡಸಲ್ವೇನಪ್ಪಾ ನಿನ್ನ ಹಾಗೆ.
ಕಿಟ್ಟಿ : ಮತ್ತೆ, ನನಗೆ ಮದುವೆ ವಯಸ್ಸಾಗಿಲ್ಲ ಅಂದಿರಿ. ನನಗೆ ಮದುವೆ ವಯಸ್ಸಾಗಿಲ್ಲ
ಅಂತ ನಿಮಗೆ ಹ್ಯಾಗೆ ಗೊತ್ತಾಯ್ತು?
ಭಾಗವತ : ನೋಡಿದರೇ ತಿಳಿಯುತ್ತಲ್ಲ-ಮೀಸೆ ಮೂಡಿಲ್ಲ, ಗಡ್ಡ ಬಂದಿಲ್ಲ.
ಕಿಟ್ಟಿ : ಏನಂದಿರಿ? (ಹೆದರಿಸುವನು)
ಭಾಗವತ : ಆಯ್ತಪ್ಪ, ನಿನಗೂ ವಯಸ್ಸಾಗಿದೆ, ಸರಿತಾನೆ?
ಕಿಟ್ಟಿ : ನನಗಲ್ಲ, ನನಗೆ ವಯಸ್ಸಾಗಿಲ್ಲ ಅಂದ್ರೆಲ್ಲಾ, ಆ ನಿಮ್ಮ ಪ್ರೇಕ್ಷಕರಿಗೆ ಹೇಳಿಕೊಳ್ಳಿ.
(ಹೋಗಿ ಮಲಗುವನು)
ಭಾಗವತ : ಎಲಾ ಇವನ!
ಅಜ್ಜಿ : (ಬಂದು) ಏ ಕಿಟ್ಟೀ, ಏಳೋ ಮೇಲೇಳೊ. ಏಳೊಂದ್ರೆ ಏಳಬೇಕು. ಏಳ್ರಾಜಾ, ಏಳೂ ಜಾಣಾ-ಅಯ್ಯೊ ಈ ಹುಡುಗನ್ನ ಏನ್ಮಾಡಿ ಎಬ್ಬಿಸಲಿ? ಏ ಕಿಟ್ಟಿ, ಏಳ್ತಿಯೊ? ಹಿರಿಯರನ್ನ ಕರಸಲೊ? ಅಯ್ಯಾ ಭಾಗವತರೇ,
ಭಾಗವತ : ಏನಮ್ಮಾ ಕರದೆ?
ಅಜ್ಜಿ : ನನ್ನ ಮೊಮ್ಮಗ ಕಿಟ್ಟಿ, ನಿನ್ನೆಯಿಂದ ಒಂದು ಮಾತಾಡಿಲ್ಲ. ಒಂದು ನಕ್ಕಿಲ್ಲ, ಒಂದು ಉಂಡಿಲ್ಲ, ತಿಂದಿಲ್ಲ, ಸುಮ್ಮನೆ ಮಲಗಿಬಿಟ್ಟಿದಾನೆ. ನೀವಾದರೂ ಎಬ್ಬಿಸಿ ಉಪಕಾರ ಮಾಡತೀರಾ?
ಭಾಗವತ : ಓಹೊ! ನಿನ್ನೆಯಿಂದ ಹೀಗೇ ಬಿದ್ದುಕೊಂಡಿದಾನಾ?
ಅಜ್ಜಿ : ಹೂ.
ಭಾಗವತ : ಹಾಗಿದ್ದರೆ ಈ ಕೇಸು ಭಾಳಾ ಸಿರಿಯಸ್ಸು. ಅಲ್ಲಮ್ಮಾ ಯಾಕೆ ಹೀಗೆ ಮಲಗಿದಾನಂತೆ?
ಅಜ್ಜಿ : ಆತ ಹೇಳಿದರಲ್ಲವೆ?
ಭಾಗವತ : ಏನಾದರೂ ತಿಂಡಿ ಕೇಳಿದ್ನಾ?
ಅಜ್ಜಿ : ಇಲ್ಲಾ.
ಭಾಗವತ : ಏನಾದರೂ ಆಟಿಗೆ ಬೇಡಿ ಅತ್ತನಾ?
ಅಜ್ಜಿ : ಇಲ್ಲಾ.
ಭಾಗವತ : ಯಾರ ಜೊತೆಗಾದರೂ ಜಗಳ ಆಡಿದ್ನಾ?
ಅಜ್ಜಿ : ಇಲ್ಲಾ.
ಭಾಗವತ : ತಿಂಡೀ ಕೇಳಿಲ್ಲಾ, ಆಟಿಗೆ ಬೇಡಿಲ್ಲಾ, ಜಗಳ ಆಡಿಲ್ಲ…ತಾಯೀ ಈತನಿಗೆ ಮದುವೆ ಮಾಡಿದ್ದೀಯಾ?
ಕಿಟ್ಟಿ : (ಮೇಲೆದ್ದು) ಕೇಳಿ ಭಾಗವತರೇ, ಅದನ್ನ ಮಾಡಿದಾಳೇನು ಕೇಳಿ.
ಭಾಗವತ : ಏನನ್ನ?
ಕಿಟ್ಟಿ : ನೀವಾಗಲೇ ಏನೋ ಅಂದಿರಲ್ಲ, ಅದನ್ನ.
ಭಾಗವತ : ಅಂದರೆ, ಮದುವೇನಾ?
ಕಿಟ್ಟಿ : ಹೂ ಹೂ. ಅದನ್ನೆ ಮಾಡಿದಾಳೇನು ಕೇಳಿ.
ಅಜ್ಜಿ : ಅಯ್ಯೊ ಶಿವನೆ! ನಿನ್ನಂಥಾ ಚಿಕ್ಕವನಿಗೆ ಮದುವೇನಾ?
ಕಿಟ್ಟಿ : ನಾನು ಚಿಕ್ಕವನೊ ದೊಡ್ಡವನೊ! ಅದನ್ನ ಹೇಳೋಳು ನನ್ನ ಹೆಂಡತಿ,
ನೀವಲ್ಲ.
ಭಾಗವತ : ಏನು ಕಲಿಕಾಲ ಬಂತಪ್ಪ?
ಕಿಟ್ಟಿ : ಏನ್ರಿ ಕಲಿಕಾಲ ಅಂತೀರಿ. ಕಲಿಕಾಲ್ದಲ್ಲಿ ಯಾರೂ ಮದುವೇನೇ ಆಗಬಾರದಾ? ‘ಬೆಳೆದು ನಿಂತಿದಾನೆ, ಮದುವೆ ಮಾಡಮ್ಮಾ’ ಅಂತ ಹೇಳೋದ ಬಿಟ್ಟು, ಏನೇನೋ ಹೇಳ್ತೀರಾ. ಅಜ್ಜೀ, ಮಾಡಜ್ಜಿ ಮದುವೆ.
ಅಜ್ಜಿ : ಛೇ ಛೇ-
ಕಿಟ್ಟಿ : ಅಜ್ಜೀ-
ಅಜ್ಜಿ : ಅಬ್ಬಬ್ಬಾ! ಇನ್ನೂ ಚಿಗರ ಮೀಸೆ ಮೂಡಿಲ್ಲಾ-
ಕಿಟ್ಟಿ : ಅಜ್ಜೀ-
ಅಜ್ಜೀ ಅಜ್ಜೀ ಹುಡಿಗಿ ಬೇಕು
ನನಗೆ ಮದುವೆ ಮಾಡಬೇಕು||
ಹಾಕಮ್ಮ ಗಂಟು
ಭಾರೀ ಅರ್ಜೆಂಟು
ಮೀಸೆ ಮೂಡಿಲ್ಲಾಂತ ಹೇಳಬೇಡ ಕುಂಟನೆಪ||
ನಿಂತೇನೆ ಉದ್ದಾ
ಎದೀತನಕಾ ಬೆಳದಾ
ಮೀಸೆ ಮೂಡಿಲ್ಲಾಂತ ಹೇಳಬ್ಯಾಡ ಕುಂಟನೆಪ||
ಕೇಳಿ ಬಂತಾ ಅಜ್ಜೀ-
ಅಜ್ಜಿ : ಸಾಧ್ಯವೆ?
ಭಾಗವತ : ಸಾಧ್ಯವೆ?
ಕಿಟ್ಟಿ : ನಿಮ್ಮಿಬ್ಬರಿಗೂ ಬುದ್ದಿಯಿಲ್ಲಾಂತ ಹೇಳೋದೇ ಇದಕ್ಕಾಗಿ. ಭಾಗವತರೇ ನಿನ್ನೆ ಏನಾಯ್ತು ಗೊತ್ತಾ?
ಭಾಗವತ : ಇಲ್ಲಪಾ.
ಕಿಟ್ಟಿ : ಚಿನ್ನಿದಾಂಡ ಆಡ್ತಿದೆ, ಮಕ್ಕಳೊಂದಿಗೆ.
ಭಾಗವತ : ನಿನ್ನ ಮಕ್ಕಳೊಂದಿಗಾ?
ಕಿಟ್ಟಿ : ಬೇರೆಯವರ ಮಕ್ಕಳೊಂದಿಗೆ. ಆಗ ಚಿನ್ನೀ ಹೊಡೆದೆ. ಹೋಗಿ ಒಬ್ಬ ಹೆಂಗಸಿನ ತಲೆಗೆ ಹೊಡೀತು. ಅವಳು ಬಿರಿ ಬಿರೀ ಹೀಗೆ ಬಂದ್ಲು. ಏನಂದ್ಲು ಗೊತ್ತಾ?
ಅಜ್ಜಿ : ಎನಂದ್ಲು?
ಕಿಟ್ಟಿ : ಹೇಳಜ್ಜಿ ನೋಡೋಣ; ಏನಂದಿರಬೇಕು?
ಅಜ್ಜಿ : ‘ಹೋಗೋ ಬರೋ ಜನ ನೋಡಿ ಚಿನ್ನಿದಾಂಡ ಆಡಬೇಕು ಮಗಾ’-
ಅಂದಿರಬೇಕು.
ಕಿಟ್ಟಿ : ಊಹೂ, ನಿವ್ಹೇಳಿ ಭಾಗವತರೇ ನೋಡೋಣ, ಏನಂದಿರಬೇಕು?
ಭಾಗವತ : ‘ರಸ್ತೆ ಮೇಲಲ್ಲ, ಬಯಲಲ್ಲಿ ಚಿನ್ನಿದಾಂಡ ಆಡಬೇಕಪಾ’- ಅಂದಿರಬೇಕು.
ಕಿಟ್ಟಿ : ಅದಕ್ಕೇ ನಿಮಿಬ್ಬರಿಗೂ ಬುದ್ದಿಯಿಲ್ಲಾ ಅಂತ ಅಂದದ್ದು. ಎನಂದ್ಲು ಗೊತ್ತಾ? ಹೀಗೆ ಬಿರಿ ಬಿರಿ ನನ್ನ ಹತ್ತಿರ ಬಂದ್ಲು. ‘ಲೋ ಅಯೋಗ್ಯ, ಇಷ್ಟುದ್ದ ಬೆಳೆದು ನಿಂತೀಯಾ, ಸಕಾಲದಲ್ಲಿ ಮದುವೆ ಆಗಿದ್ದರೆ ಇಷ್ಟೊಂದ ಜನ ಮಕ್ಕಳ ತಂದೆ ಆಗತಿದ್ದೆ, ನಾಚಿಕೆ ಆಗೋಲ್ಲಾ? ಯಾರೋ ನಿನ್ನ ಬೆಳೆಸಿದವರು? ಜೋಪಾನ ಮಾಡಿದವರು? ಅವರಿಗಾದರೂ ಮಾನ ಮರ್ಯಾದೆ ಇಲ್ಲಾ?’-
ಅಜ್ಜಿ : ಅಂದಳಾ?
ಕಿಟ್ಟಿ : ಹೂ. ಹೀಗೇ ಅಂದ್ಲು!
ಅಜ್ಜಿ : ಅಯ್ಯೊ ಶಿವನೆ, ನನ್ನ ಮಾನ ಮರ್ಯಾದೆಯೆಲ್ಲಾ ಹೋಯ್ತಲ್ಲೊ!
ಕಿಟ್ಟಿ : ಕುಡಲೇ ನನಗೊಂದು ಮದುವೆ ಮಾಡು. ನಿನಗೂ ಮಾನ ಮರ್ಯಾದೆ ಇದೆ ಅಂತ ಅವಳನ್ನ ಹುಡುಕ್ಕೊಂಡ ಹೋಗಿ, ಹೇಳಿ ಬರ್ತೀನಿ.
ಅಜ್ಜಿ : ಅಯ್ಯೊ ಶಿವನೆ! ತಂದೆ ತಾಯಿ ಇಲ್ಲದ ನಿನ್ನನ್ನ ಇಷ್ಟೊಂದು ಕಷ್ಟಪಟ್ಟು ಬೆಳಸಿದ್ದೆಲ್ಲಾ ವ್ಯರ್ಥವಾಯ್ತಲ್ಲೊ!
ಕಿಟ್ಟಿ : ಅದಕ್ಕೇ ಈಗೊಂದು ಮದುವೆ ಮಾಡು, ಎಲ್ಲಾ ಸಾರ್ಥಕವಾಗತದೆ.
ಅಜ್ಜಿ : ಅದ್ಯಾಕಜ್ಜಿ ಯೋಚನೆ ಮಾಡ್ತಿ? ನನ್ನ ಹತ್ತಿರ ಹತ್ತು ಪೈಸೆ ಇದೆ. ಒಂದು ಪೈಸೆ ವಧುವಿಗೆ ಸೀರೆ, ಒಂದು ಪೈಸೆ ನನ್ನ ಬಟ್ಟೆ, ಒಂದು ಪೈಸೆ ಊಟ, ಒಂದು ಪೈಸೆ ಪುರೋಹಿತರ ಫೀಜು, ಒಂದು ಪೈಸೆ ಹಾಸಿಗೆ, ಹತ್ತರಲ್ಲಿ ಇನ್ನೆಷ್ಟುಉಳೀತು ಭಾಗವತರೇ?
ಭಾಗವತ : ಓ ಇನ್ನೂ ಐದು ಪೈಸೆ ಉಳಿಯಿತು.
ಕಿಟ್ಟಿ : ಅದನ್ನ ನನ್ನ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟುಬಿಡು.
ಭಾಗವತ : ಮತ್ತೆ ಹುಡಿಗಿ?
ಕಿಟ್ಟಿ : ಅದೇನು ಮಹಾ! ಯಾವುದಾದರೂ ಕಾಲೇಜ ಕಡೆ ಹೋದರೆ ಯದ್ವಾ ತದ್ವಾ ಹುಡಿಗೀರು ಸಿಗತಾರೆ!
ಅಜ್ಜಿ : ಹತ್ತ ಪೈಸಾದಲ್ಲಿ ಮದುವೆ! ಭಾಗವತರೇ ಇರೋನೊಬ್ಬ ಮೊಮ್ಮಗ. ಅವನಿಗೋ ಮದುವೆ ಹುಚ್ಚು ನೆತ್ತಿಗೇರಿಬಿಟ್ಟಿದೆ, ಏನು ಮಾಡೋದು?
ಕಿಟ್ಟಿ : ಮದುವೆ.
ಅಜ್ಜಿ : ಭಾಗವತರೇ,
ಭಾಗವತ : ಏನಜ್ಜಿ?
ಅಜ್ಜಿ : ಏನ್ಮಾಡೋದು ಅಂತ ನಿಮ್ಮನ್ನ ಕೇಳಿದೆ.
ಭಾಗವತ : ಹೇಳ್ತಾನಲ್ಲಾ ಮದುವೆ ಅಂತ.
ಕಿಟ್ಟಿ : ಅಜ್ಜಿ ನನಗಿದೆಯಲ್ಲಾ ಸರಿಬರೋದಿಲ್ಲ. ನೀನೇನು ಈ ಹತ್ತು ಪೈಸಾದಲ್ಲಿ ಮದುವೆ ಮಾಡ್ತಿಯೊ, ಅಥವಾ ನಾನೇ ಮಾಡಿಕೊಂಡು ಬರಲೊ?
ಅಜ್ಜಿ : ಇವನ ಮಾತ ಕೇಳಿ ನನಗೂ ಹುಚ್ಚು ಹತ್ತುತಾ ಇದೆಯಲ್ಲ ಭಾಗವತರೇ!
ಕಿಟ್ಟಿ : ಸರಿ ಸರಿ ಈ ಹತ್ತು ಪೈಸಾದಲ್ಲೇ ಮದುವೆ ಮಾಡಿಕೊಂಡು ಬರ್ತೀನಿ ನೋಡ್ತಾ ಇರಿ.
(ಭಾಗವತ, ಅಜ್ಜಿ ‘ಕಿಟ್ಟೀ ಕಿಟ್ಟೀ ತಡೆಯೋ’ ಎನ್ನುತ್ತಿರುವಂತೆ ಕಿಟ್ಟಿ ಹೋಗುವನು.)
ಹಾಕಮ್ಮ ಗಂಟು (ಕಿಟ್ಟಿಯ ಆಗಮನ. ಹತ್ತಿರ ನೋಡಿ ಕಂಬಳಿ ಹೊದ್ದು ಮಲಗುತ್ತಾನೆ. ಅಜ್ಜಿ ಅದು ಇದು ಕೆಲಸ ಮಾಡುತ್ತ ಬರುತ್ತಾಳೆ.)br ಅಜ್ಜಿ ಏ ಕಿಟ್ಟೀ, ಏಳೊ ಮೇಲೇಳೊ. ಏಳೊ ಅಂದರೆ ಏಳಬೇಕು. ಸ್ಕೂಲಿಗೆ ಹೊತ್ತಾಗೋಯ್ತು. ಏಳೋ ಅಂದ್ರೆ.br ಭಾಗವತ (ಆಗಮಿಸಿ) ಇದೇನು ನಾನು ಬರೋದರೊಳಗೇ ನಾಟಕ ಸುರುವಾಗಿ ಬಿಟ್ಟದೆ! ಯಾರು ಈ ಮುದುಕಮ್ಮ ಯಾರನ್ನ ಎಬ್ಬಿಸ್ತಿದಾಳೆ ಏ ಏ ಮುದುಕಮ್ಮ, ತಡಿ ತಡಿ. ಏನಿದು ನಾನು ಬರೋದರೊಳಗೇ ನಾಟಕ ಸುರು ಮಾಡೋದೆ ಹೇಳಿಲ್ಲಾ ನಿನಗೆ ಶಾಸ್ತ್ರದ ಪ್ರಕಾರ ನಾಟಕ ಸುರುವಾಗಬೇಕು. ಆಮೇಲೆ ನಿನ್ನ ಪ್ರವೇಶ ಅಂತ ಈ ಮುದಿಕೇರ ಹಣೇಬರಾನೇ ಇಷ್ಟು. ಈಗ ಮೊದಲು ನನ್ನ ಮಾತಿದೆ. ಸ್ವಲ್ಪ ಆಚೆ ಹೋಗ್ತೀಯಾbr ಅಜ್ಜಿ ಯಾರೋ ತಮ್ಮಾ ನೀನುbr ಭಾಗವತ ನಾನು ಯಾರು ಇದೊಳ್ಳೆದಾಯ್ತಲ್ಲ, ನಾನು ಭಾಗವತ. ರಂಗದ ಮೇಲೆ ನಿಮ್ಮಂಥವರು ಬರ್ತೀರಲ್ಲ ನಿಮ್ಮನ್ನ ಈ ಪ್ರೇಕ್ಷಕರಿಗೆ ಪರಿಚಯ ಮಾಡಿಸಬೇಕು. ನಮ್ಮ ಆಟದ ವಿಷಯ ಹೇಳಬೇಕು. ಅದು ಬಿಟ್ಟು ಯಾರಂತ ನನ್ನೇ ಕೇಳ್ತಿದ್ದೀಯಾ! ಬಲೇ ಮುದುಕಿ ನೀನು! ಸ್ವಲ್ಪ ಆಚೆ ಹೋಗ್ತೀಯಾbr ಅಜ್ಜಿ ಯಾವನಯ್ಯಾ ನೀನು ನನ್ನ ಮನೆ, ನನ್ನ ಮೊಮ್ಮಗ, ನನ್ನ ಮಾತು. ನನಗೇ ಆಚೆ ಹೋಗಂತೀಯಾ. ನನ್ನ ಯಜಮಾನ ಕೂಡ ಹಾಗ್ಹೇಳಲಿಲ್ಲ.br ಭಾಗವತ ಓಹೋ! ಈ ಪಾತ್ರಗಳಿಗೆಲ್ಲಾ ಆಗಲೇ ಜೀವ ಬಂದುಬಿಟ್ಟಿದೆ. ಇವನ್ನೀಗ ಕಂಟ್ರೋಲ್ ಮಾಡೋದೇ ಕಷ್ಟ. ಆಯ್ತಮ್ಮಾ ನಾನು ಭಾಷಣಾ ಮಾಡೋ ದಿಲ್ಲ, ಒಂದೆರಡು ಮಾತು ಹೇಳ್ತೇನೆ. ಸ್ವಲ್ಪ ತೆಪ್ಪಗಿರ್ತೀಯಾbr ಅಜ್ಜಿ ಅದೇನೊ ಬೇಗನೆ ಮುಗಸು. ನಾನು ಇಷ್ಟರಲ್ಲೇ ಬರತೇನೆ.br (ಹೋಗುವಳು)br ಭಾಗವತ ಪ್ರೇಕ್ಷಕ ಮಕ್ಕಳಲ್ಲಿ ವಿಜ್ಞಾಪನೆ. ಈ ಹೊತ್ತು ನಾವು ಆಡೋ ಆಟ ಕಿಟ್ಟೀ ಕಥೆ. ಕಿಟ್ಟಿ ನಿಮ್ಮ ಹಾಗೇ ಒಬ್ಬ ಹುಡುಗ. ವಯಸ್ಸು ಎಷ್ಟೋ ಇರಬಹುದು. ಮದುವೆ ವಯಸ್ಸಂತೂ ಖಂಡಿತ ಅಲ್ಲ, ಬೇಕಾದರೆ ನೀವೇ ನೋಡಿ-ಎಲ್ಲಿ ಕಿಟ್ಟೀ ಕಿಟ್ಟೀ, ಏ ಕಿಟ್ಟೀ-br ಕಿಟ್ಟಿ (ಮಲಗಿಕೊಂಡೇ) ಏನು ಭಾಗವತರೇbr ಭಾಗವತ ಅಪ್ಪಾ, ನೀನು ನಮ್ಮ ಕಥಾನಾಯಕ. ಆಟದ ಆರಂಭದಲ್ಲಿ ನಮ್ಮ ಪ್ರೇಕ್ಷಕರಿಗೆ ನಿನ್ನ ಪರಿಚಯ ಮಾಡಿಕೊಡಬೇಕು. ಈಚೆ ಬರತೀಯಾbr ಕಿಟ್ಟಿ ನಮ್ಮ ಜ್ಜಿ ಇಲ್ಲ ತಾನೆbr ಭಾಗವತ ಯಾಕೆ ಹೆದರಿದೆಯಾbr ಕಿಟ್ಟಿ (ಎದ್ದು ಬಂದು) ಹೆದರಲಿಲ್ಲ ಭಾಗವತರೇ, ರೇಗಿಕೊಂಡು ಎದ್ದು ಬಂದೆ!br ಭಾಗವತ ರೇಗಿಕೊಂಡು ಆಯರ ಮೇಲೆbr ಕಿಟ್ಟಿ ನಿಮ್ಮ ಮೇಲೆ.br ಭಾಗವತ ನನ್ನ ಮೇಲೆ ಅದ್ಯಾಕಪ್ಪbr ಕಿಟ್ಟಿ ನನ್ನ ಮದುವೆ ಮಾಡಬಾರದು ಅಂತಲಾ ನಿಮ್ಮ ಅಭಿಪ್ರಾಯbr ಭಾಗವತ ಛೇ ಛೇ, ನಾನೂ ಗಂಡಸಲ್ವೇನಪ್ಪಾ ನಿನ್ನ ಹಾಗೆ.br ಕಿಟ್ಟಿ ಮತ್ತೆ, ನನಗೆ ಮದುವೆ ವಯಸ್ಸಾಗಿಲ್ಲ ಅಂದಿರಿ. ನನಗೆ ಮದುವೆ ವಯಸ್ಸಾಗಿಲ್ಲbr ಅಂತ ನಿಮಗೆ ಹ್ಯಾಗೆ ಗೊತ್ತಾಯ್ತುbr ಭಾಗವತ ನೋಡಿದರೇ ತಿಳಿಯುತ್ತಲ್ಲ-ಮೀಸೆ ಮೂಡಿಲ್ಲ, ಗಡ್ಡ ಬಂದಿಲ್ಲ.br ಕಿಟ್ಟಿ ಏನಂದಿರಿ (ಹೆದರಿಸುವನು)br ಭಾಗವತ ಆಯ್ತಪ್ಪ, ನಿನಗೂ ವಯಸ್ಸಾಗಿದೆ, ಸರಿತಾನೆbr ಕಿಟ್ಟಿ ನನಗಲ್ಲ, ನನಗೆ ವಯಸ್ಸಾಗಿಲ್ಲ ಅಂದ್ರೆಲ್ಲಾ, ಆ ನಿಮ್ಮ ಪ್ರೇಕ್ಷಕರಿಗೆ ಹೇಳಿಕೊಳ್ಳಿ.br (ಹೋಗಿ ಮಲಗುವನು)br ಭಾಗವತ ಎಲಾ ಇವನ!br ಅಜ್ಜಿ (ಬಂದು) ಏ ಕಿಟ್ಟೀ, ಏಳೋ ಮೇಲೇಳೊ. ಏಳೊಂದ್ರೆ ಏಳಬೇಕು. ಏಳ್ರಾಜಾ, ಏಳೂ ಜಾಣಾ-ಅಯ್ಯೊ ಈ ಹುಡುಗನ್ನ ಏನ್ಮಾಡಿ ಎಬ್ಬಿಸಲಿ ಏ ಕಿಟ್ಟಿ, ಏಳ್ತಿಯೊ ಹಿರಿಯರನ್ನ ಕರಸಲೊ ಅಯ್ಯಾ ಭಾಗವತರೇ,br ಭಾಗವತ ಏನಮ್ಮಾ ಕರದೆbr ಅಜ್ಜಿ ನನ್ನ ಮೊಮ್ಮಗ ಕಿಟ್ಟಿ, ನಿನ್ನೆಯಿಂದ ಒಂದು ಮಾತಾಡಿಲ್ಲ. ಒಂದು ನಕ್ಕಿಲ್ಲ, ಒಂದು ಉಂಡಿಲ್ಲ, ತಿಂದಿಲ್ಲ, ಸುಮ್ಮನೆ ಮಲಗಿಬಿಟ್ಟಿದಾನೆ. ನೀವಾದರೂ ಎಬ್ಬಿಸಿ ಉಪಕಾರ ಮಾಡತೀರಾbr ಭಾಗವತ ಓಹೊ! ನಿನ್ನೆಯಿಂದ ಹೀಗೇ ಬಿದ್ದುಕೊಂಡಿದಾನಾbr ಅಜ್ಜಿ ಹೂ.br ಭಾಗವತ ಹಾಗಿದ್ದರೆ ಈ ಕೇಸು ಭಾಳಾ ಸಿರಿಯಸ್ಸು. ಅಲ್ಲಮ್ಮಾ ಯಾಕೆ ಹೀಗೆ ಮಲಗಿದಾನಂತೆbr ಅಜ್ಜಿ ಆತ ಹೇಳಿದರಲ್ಲವೆbr ಭಾಗವತ ಏನಾದರೂ ತಿಂಡಿ ಕೇಳಿದ್ನಾbr ಅಜ್ಜಿ ಇಲ್ಲಾ.br ಭಾಗವತ ಏನಾದರೂ ಆಟಿಗೆ ಬೇಡಿ ಅತ್ತನಾbr ಅಜ್ಜಿ ಇಲ್ಲಾ.br ಭಾಗವತ ಯಾರ ಜೊತೆಗಾದರೂ ಜಗಳ ಆಡಿದ್ನಾbr ಅಜ್ಜಿ ಇಲ್ಲಾ.br ಭಾಗವತ ತಿಂಡೀ ಕೇಳಿಲ್ಲಾ, ಆಟಿಗೆ ಬೇಡಿಲ್ಲಾ, ಜಗಳ ಆಡಿಲ್ಲ…ತಾಯೀ ಈತನಿಗೆ ಮದುವೆ ಮಾಡಿದ್ದೀಯಾbr ಕಿಟ್ಟಿ (ಮೇಲೆದ್ದು) ಕೇಳಿ ಭಾಗವತರೇ, ಅದನ್ನ ಮಾಡಿದಾಳೇನು ಕೇಳಿ.br ಭಾಗವತ ಏನನ್ನbr ಕಿಟ್ಟಿ ನೀವಾಗಲೇ ಏನೋ ಅಂದಿರಲ್ಲ, ಅದನ್ನ.br ಭಾಗವತ ಅಂದರೆ, ಮದುವೇನಾbr ಕಿಟ್ಟಿ ಹೂ ಹೂ. ಅದನ್ನೆ ಮಾಡಿದಾಳೇನು ಕೇಳಿ.br ಅಜ್ಜಿ ಅಯ್ಯೊ ಶಿವನೆ! ನಿನ್ನಂಥಾ ಚಿಕ್ಕವನಿಗೆ ಮದುವೇನಾbr ಕಿಟ್ಟಿ ನಾನು ಚಿಕ್ಕವನೊ ದೊಡ್ಡವನೊ! ಅದನ್ನ ಹೇಳೋಳು ನನ್ನ ಹೆಂಡತಿ,br ನೀವಲ್ಲ.br ಭಾಗವತ ಏನು ಕಲಿಕಾಲ ಬಂತಪ್ಪbr ಕಿಟ್ಟಿ ಏನ್ರಿ ಕಲಿಕಾಲ ಅಂತೀರಿ. ಕಲಿಕಾಲ್ದಲ್ಲಿ ಯಾರೂ ಮದುವೇನೇ ಆಗಬಾರದಾ ‘ಬೆಳೆದು ನಿಂತಿದಾನೆ, ಮದುವೆ ಮಾಡಮ್ಮಾ’ ಅಂತ ಹೇಳೋದ ಬಿಟ್ಟು, ಏನೇನೋ ಹೇಳ್ತೀರಾ. ಅಜ್ಜೀ, ಮಾಡಜ್ಜಿ ಮದುವೆ.br ಅಜ್ಜಿ ಛೇ ಛೇ-br ಕಿಟ್ಟಿ ಅಜ್ಜೀ-br ಅಜ್ಜಿ ಅಬ್ಬಬ್ಬಾ! ಇನ್ನೂ ಚಿಗರ ಮೀಸೆ ಮೂಡಿಲ್ಲಾ-br ಕಿಟ್ಟಿ ಅಜ್ಜೀ-br ಅಜ್ಜೀ ಅಜ್ಜೀ ಹುಡಿಗಿ ಬೇಕುbr ನನಗೆ ಮದುವೆ ಮಾಡಬೇಕುbr ಹಾಕಮ್ಮ ಗಂಟುbr ಭಾರೀ ಅರ್ಜೆಂಟುbr ಮೀಸೆ ಮೂಡಿಲ್ಲಾಂತ ಹೇಳಬೇಡ ಕುಂಟನೆಪbr ನಿಂತೇನೆ ಉದ್ದಾbr ಎದೀತನಕಾ ಬೆಳದಾbr ಮೀಸೆ ಮೂಡಿಲ್ಲಾಂತ ಹೇಳಬ್ಯಾಡ ಕುಂಟನೆಪbr ಕೇಳಿ ಬಂತಾ ಅಜ್ಜೀ-br ಅಜ್ಜಿ ಸಾಧ್ಯವೆbr ಭಾಗವತ ಸಾಧ್ಯವೆbr ಕಿಟ್ಟಿ ನಿಮ್ಮಿಬ್ಬರಿಗೂ ಬುದ್ದಿಯಿಲ್ಲಾಂತ ಹೇಳೋದೇ ಇದಕ್ಕಾಗಿ. ಭಾಗವತರೇ ನಿನ್ನೆ ಏನಾಯ್ತು ಗೊತ್ತಾbr ಭಾಗವತ ಇಲ್ಲಪಾ.br ಕಿಟ್ಟಿ ಚಿನ್ನಿದಾಂಡ ಆಡ್ತಿದೆ, ಮಕ್ಕಳೊಂದಿಗೆ.br ಭಾಗವತ ನಿನ್ನ ಮಕ್ಕಳೊಂದಿಗಾbr ಕಿಟ್ಟಿ ಬೇರೆಯವರ ಮಕ್ಕಳೊಂದಿಗೆ. ಆಗ ಚಿನ್ನೀ ಹೊಡೆದೆ. ಹೋಗಿ ಒಬ್ಬ ಹೆಂಗಸಿನ ತಲೆಗೆ ಹೊಡೀತು. ಅವಳು ಬಿರಿ ಬಿರೀ ಹೀಗೆ ಬಂದ್ಲು. ಏನಂದ್ಲು ಗೊತ್ತಾbr ಅಜ್ಜಿ ಎನಂದ್ಲುbr ಕಿಟ್ಟಿ ಹೇಳಜ್ಜಿ ನೋಡೋಣ; ಏನಂದಿರಬೇಕುbr ಅಜ್ಜಿ ‘ಹೋಗೋ ಬರೋ ಜನ ನೋಡಿ ಚಿನ್ನಿದಾಂಡ ಆಡಬೇಕು ಮಗಾ’-br ಅಂದಿರಬೇಕು.br ಕಿಟ್ಟಿ ಊಹೂ, ನಿವ್ಹೇಳಿ ಭಾಗವತರೇ ನೋಡೋಣ, ಏನಂದಿರಬೇಕುbr ಭಾಗವತ ‘ರಸ್ತೆ ಮೇಲಲ್ಲ, ಬಯಲಲ್ಲಿ ಚಿನ್ನಿದಾಂಡ ಆಡಬೇಕಪಾ’- ಅಂದಿರಬೇಕು.br ಕಿಟ್ಟಿ ಅದಕ್ಕೇ ನಿಮಿಬ್ಬರಿಗೂ ಬುದ್ದಿಯಿಲ್ಲಾ ಅಂತ ಅಂದದ್ದು. ಎನಂದ್ಲು ಗೊತ್ತಾ ಹೀಗೆ ಬಿರಿ ಬಿರಿ ನನ್ನ ಹತ್ತಿರ ಬಂದ್ಲು. ‘ಲೋ ಅಯೋಗ್ಯ, ಇಷ್ಟುದ್ದ ಬೆಳೆದು ನಿಂತೀಯಾ, ಸಕಾಲದಲ್ಲಿ ಮದುವೆ ಆಗಿದ್ದರೆ ಇಷ್ಟೊಂದ ಜನ ಮಕ್ಕಳ ತಂದೆ ಆಗತಿದ್ದೆ, ನಾಚಿಕೆ ಆಗೋಲ್ಲಾ ಯಾರೋ ನಿನ್ನ ಬೆಳೆಸಿದವರು ಜೋಪಾನ ಮಾಡಿದವರು ಅವರಿಗಾದರೂ ಮಾನ ಮರ್ಯಾದೆ ಇಲ್ಲಾ’-br ಅಜ್ಜಿ ಅಂದಳಾbr ಕಿಟ್ಟಿ ಹೂ. ಹೀಗೇ ಅಂದ್ಲು!br ಅಜ್ಜಿ ಅಯ್ಯೊ ಶಿವನೆ, ನನ್ನ ಮಾನ ಮರ್ಯಾದೆಯೆಲ್ಲಾ ಹೋಯ್ತಲ್ಲೊ!br ಕಿಟ್ಟಿ ಕುಡಲೇ ನನಗೊಂದು ಮದುವೆ ಮಾಡು. ನಿನಗೂ ಮಾನ ಮರ್ಯಾದೆ ಇದೆ ಅಂತ ಅವಳನ್ನ ಹುಡುಕ್ಕೊಂಡ ಹೋಗಿ, ಹೇಳಿ ಬರ್ತೀನಿ.br ಅಜ್ಜಿ ಅಯ್ಯೊ ಶಿವನೆ! ತಂದೆ ತಾಯಿ ಇಲ್ಲದ ನಿನ್ನನ್ನ ಇಷ್ಟೊಂದು ಕಷ್ಟಪಟ್ಟು ಬೆಳಸಿದ್ದೆಲ್ಲಾ ವ್ಯರ್ಥವಾಯ್ತಲ್ಲೊ!br ಕಿಟ್ಟಿ ಅದಕ್ಕೇ ಈಗೊಂದು ಮದುವೆ ಮಾಡು, ಎಲ್ಲಾ ಸಾರ್ಥಕವಾಗತದೆ.br ಅಜ್ಜಿ ಅದ್ಯಾಕಜ್ಜಿ ಯೋಚನೆ ಮಾಡ್ತಿ ನನ್ನ ಹತ್ತಿರ ಹತ್ತು ಪೈಸೆ ಇದೆ. ಒಂದು ಪೈಸೆ ವಧುವಿಗೆ ಸೀರೆ, ಒಂದು ಪೈಸೆ ನನ್ನ ಬಟ್ಟೆ, ಒಂದು ಪೈಸೆ ಊಟ, ಒಂದು ಪೈಸೆ ಪುರೋಹಿತರ ಫೀಜು, ಒಂದು ಪೈಸೆ ಹಾಸಿಗೆ, ಹತ್ತರಲ್ಲಿ ಇನ್ನೆಷ್ಟುಉಳೀತು ಭಾಗವತರೇbr ಭಾಗವತ ಓ ಇನ್ನೂ ಐದು ಪೈಸೆ ಉಳಿಯಿತು.br ಕಿಟ್ಟಿ ಅದನ್ನ ನನ್ನ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟುಬಿಡು.br ಭಾಗವತ ಮತ್ತೆ ಹುಡಿಗಿbr ಕಿಟ್ಟಿ ಅದೇನು ಮಹಾ! ಯಾವುದಾದರೂ ಕಾಲೇಜ ಕಡೆ ಹೋದರೆ ಯದ್ವಾ ತದ್ವಾ ಹುಡಿಗೀರು ಸಿಗತಾರೆ!br ಅಜ್ಜಿ ಹತ್ತ ಪೈಸಾದಲ್ಲಿ ಮದುವೆ! ಭಾಗವತರೇ ಇರೋನೊಬ್ಬ ಮೊಮ್ಮಗ. ಅವನಿಗೋ ಮದುವೆ ಹುಚ್ಚು ನೆತ್ತಿಗೇರಿಬಿಟ್ಟಿದೆ, ಏನು ಮಾಡೋದುbr ಕಿಟ್ಟಿ ಮದುವೆ.br ಅಜ್ಜಿ ಭಾಗವತರೇ,br ಭಾಗವತ ಏನಜ್ಜಿbr ಅಜ್ಜಿ ಏನ್ಮಾಡೋದು ಅಂತ ನಿಮ್ಮನ್ನ ಕೇಳಿದೆ.br ಭಾಗವತ ಹೇಳ್ತಾನಲ್ಲಾ ಮದುವೆ ಅಂತ.br ಕಿಟ್ಟಿ ಅಜ್ಜಿ ನನಗಿದೆಯಲ್ಲಾ ಸರಿಬರೋದಿಲ್ಲ. ನೀನೇನು ಈ ಹತ್ತು ಪೈಸಾದಲ್ಲಿ ಮದುವೆ ಮಾಡ್ತಿಯೊ, ಅಥವಾ ನಾನೇ ಮಾಡಿಕೊಂಡು ಬರಲೊbr ಅಜ್ಜಿ ಇವನ ಮಾತ ಕೇಳಿ ನನಗೂ ಹುಚ್ಚು ಹತ್ತುತಾ ಇದೆಯಲ್ಲ ಭಾಗವತರೇ!br ಕಿಟ್ಟಿ ಸರಿ ಸರಿ ಈ ಹತ್ತು ಪೈಸಾದಲ್ಲೇ ಮದುವೆ ಮಾಡಿಕೊಂಡು ಬರ್ತೀನಿ ನೋಡ್ತಾ ಇರಿ.br (ಭಾಗವತ, ಅಜ್ಜಿ ‘ಕಿಟ್ಟೀ ಕಿಟ್ಟೀ ತಡೆಯೋ’ ಎನ್ನುತ್ತಿರುವಂತೆ ಕಿಟ್ಟಿ ಹೋಗುವನು.)br br
ನಾಯೆಲ್ಯ ಅಂಗೀಯೆಲ್ಯಾ ಆದದ್ದು
ನಾಯೆಲ್ಯಾ ಬುದ್ಧಿಗಲಿತಾಗಿನಿಂದ ಹಾಕುತ್ತಿದ್ದುದು ಗೌಡನ ಹಳೆಯ ಅಂಗಿಗಳನ್ನೇ. ಅವನೊಮ್ಮೆಯೂ ಹೊಸ ಅಂಗಿ ಹೊಲಿಸಿಕೊಂಡವನೇ ಅಲ್ಲ. ಹೊಲಿಸಿಕೋ ಎಂದು ಕೊಟ್ಟರೂ ಕುಡಿಯುತ್ತಿದ್ದ. ಗೌಡನಿಗೆ ಬೇಸರವಾಯ್ತು. ಕತ್ತೆಯಂಥ ಕತ್ತೆ ಒಂದಾಣೆಯ ಹಗ್ಗ ಹರಿಯತ್ತದೆ. ನಾಯೆಲ್ಯಾ ಒಂದು ಅಂಗಿಯನ್ನಾದರೂ ಹರಿಯದಿದ್ದರೆ ಹೇಗೆ? ಅವನಳತೆಯ ಎರಡು ಹೊಸ ಅಂಗಿಗಳನ್ನು ಹೊಲಿಸಿಕೊಟ್ಟ.
ಹೊಸ ಅಂಗಿ ಹಾಕಿಕೊಂಡಾಗ ನಾಯಿಲ್ಯಾನನ್ನು ಹಿಡಿಯುವವರೇ ಇಲ್ಲ. ಊರ ತುಂಬ ವಿನಾಕಾರಣ ಅಡ್ಡಾಡಿ ಬಂದ. ಬರುಹೋಗುವವರ ಯೋಗಕ್ಷೇಮ ಕೇಳಿದ. ಕೆಲಸ ಮಾಡುವಾಗ ಅದನ್ನು ಕಳಚಿಟ್ಟಿದ್ದೇನು, ಹೆಂಡತಿ ಮುಟ್ಟ ಬಂದರೆ ಅವಳ ಹೊಲಸು ಕೈಗೆ ಮುನಿದದ್ದೇನು, ಮಲಗುವಾಗ ಕಂಬಳಿ ಝಾಡಿಸಿ ಝಾಡಿಸಿ ಹಾಸಿಕೊಂಡದ್ದೇನು! ಇವನ ಸಡಗರಕ್ಕೆ ಕೊಂಬು ಮೂಡಿಸಂತೆ ಸಾವಳಗಿಯ ಜಾತ್ರೆ ಬಂತು. ಊರಿಗಿಂತ ಮುಂಚೆಯೇ ಹೋದ, ಅಡ್ಡಾಡಿದ. ಜಾತ್ರೆಯ ಪ್ರತಿಯೊಬ್ಬರ ಅಂಗಿಯ ಜೊತೆ ತನ್ನ ಅಂಗಿ ಹೋಲಿಸಿಕೊಂಡ. ಆಯಿತು. ಜಾತ್ರೆಯೆಲ್ಲಾ ಮುಗಿದು ಮಾರನೇ ದಿನ ಗುಡಿಸಲಿಗೆ ಬಂದ, ನೋಡಿದರೆ ಬರೀ ಲಂಗೋಟಿಯಲ್ಲೇ ಇದ್ದ! ರಂಗಿ ಯಾಕೆಂದು ಕೇಳಿದರೆ ಹೀಗಾಯಿತಂತೆ:
ರಾತ್ರಿ ಬಯಲಾಟಕ್ಕೆ ಶೂದ್ರರ ಬಳಗದಲ್ಲಿ ಹೋಗಿ ಮುಂದಾಗಿಯೇ ಕೂತನಂತೆ. ಫಕ್ಕನೆ ಅಂಗಿಯ ಬಗ್ಗೆ ಚಿಂತೆ ಮೂಡಿತು. ಮಠದ ಹುಗ್ಗೀ ಪ್ರಸಾದ ಹೊಟ್ಟೆತುಂಬ ಗಚ್ಚಿನಂತೆ ಗಟ್ಟಿಯಾಗಿ ಇಳಿದಿತ್ತು. ಗೌಡ ಜಾತ್ರೆಗೆಂದು ಕೊಟ್ಟ ಚವಲಿಯಿಂದ ಹೆಂಡ ಕುಡಿದಿದ್ದ. ಅಂಗಿಯ ಸಡಗರದಲ್ಲಿ ಹೆಚ್ಚಾಗಿಯೇ ಓಡಾಡಿದ್ದ. ಮಂಪರು ಬಂದು ಕಣ್ಣುಮುಚ್ಚತೊಡಗಿದವು. ಸುತ್ತ ನೋಡಿದರೆ ಒಬ್ಬ ಶೂದ್ರನಿಗೂ ಮೈಮೇಲೆ ತನ್ನಂಥ ಅಂಗಿಯಿಲ್ಲ. ಒಮ್ಮೆ ನಿದ್ದೆ ಹತ್ತಿತೋ – ತನ್ನ ನಿದ್ದೆ ಸಾಮಾನ್ಯವೆ? ಮರದ ತುಂಡಿನಂತೆ ಬಿದ್ದ – ಎನ್ನೋಣ, ಆಮೇಲೆ ತನ್ನ ಅಂಗಿಯನ್ನು ಯಾರಾದರೂ ಕಳಚಿಕೊಂಡರೆ? ನಿದ್ದೆ ಮಾಡುವುದೇ – ಬೇಡ ಎನ್ನೋಣ. ಬರೋ ನಿದ್ದೆ ಹೇಳಿ ಕೇಳಿ ತನ್ನಪ್ಪಣೆ ಕೇಳಿ ಬರುತ್ತದೋ? ಆದ್ದರಿಂದ ಅಂಗೀ ಕಳಚಿ ಬಗಲಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಬಯಲಾಟ ನೋಡಿದರೆ, ಮೈಗೆ ತಂಗಾಳಿ ಸವರಿ ಇತ್ತ ನಿದ್ದೆಯೂ ಬರುವುದಿಲ್ಲ; ಒಂದು ವೇಳೆ ಬಂದರೂ ಬಗಲಲ್ಲಿಯ ಅಂಗಿಯನ್ನಾದರೂ ಕಿತ್ತುಕೊಳ್ಳುವಾಗ ತನಗೆ ಎಚ್ಚರವಾಗೇ ಆಗುತ್ತದೆ! ಹೀಗೆಂದುಕೊಂಡು ಅಂಗೀ ಕಳಚಿ ಮುದ್ದೆಮಾಡಿ ಬಗಲಲ್ಲಿ ಗಟ್ಟಿಯಾಗಿ ಹಿಡಿದು, ಅವಚಿಕೊಂಡು ಕೂತ. ನಿದ್ದೆಯೂ ಬಂತು. ಮುಂದಿನ ಕತೆ ನಿಮಗೆ ಗೊತ್ತೇ ಇದೆ. ನಾಯಲ್ಯಾ ತನ್ನ ಮೊದಲನೇ ಅಂಗಿ ಕಳಕೊಂಡದ್ದು ಹೀಗೆ.
ಒಂದು ಸಲ ‘ಮುನಿಯೆಲ್ಯಾ’ ಅಂದರೆ ಅದೇ ಅವನ ಕರಿನಾಯಿ ಇತ್ತಲ್ಲಾ, ಅದಕ್ಕೆ ಅದೇನು ಸ್ಫೂರ್ತಿ ಉಕ್ಕಿತೋ ಮಧ್ಯರಾತ್ರಿ, ಅಮಾವಾಸ್ಯೆ ಕತ್ತಲಲ್ಲಿ ಜೋರಿನಿಂದ, ಊರ ನಿಶ್ಯಬ್ದತೆ ಸೀಳಿ ಎರಡಾಗುವಂತೆ ಕಿರಿಚಿತು. ಕೇಳಿದ ಊರ ನಾಯಿಗಳು ಫಕ್ಕನೆ ಎಚ್ಚತ್ತು ತಂತಮ್ಮ ಸ್ಥಳಗಳಲ್ಲೇ ನಿಂತುಕೊಂಡು ಹೊಲಗೇರಿಯ ಕಡೆ ಮುಖಮಾಡಿ, ಜಿಗ್ಗಾಲು ಕೊಟ್ಟು ಕೂಗಲಾರಂಭಿಸಿದವು. ಎಷ್ಟು ಹೊತ್ತಾದರೂ ಅವುಗಳ ಸೊಲ್ಲು ನಿಲ್ಲಲೊಲ್ಲದು. ಯಾರೋ ಕಳ್ಳ ನುಗ್ಗಿರಬೇಕೆಂದು ಮಲಗಿದ್ದವರು ಎದ್ದರು. ನೋಡಿದರೆ ಯಾರೂ ಇರಲಿಲ್ಲ. ಅವಾವಾಸ್ಯೆಯಲ್ಲವೆ? ಕರಿಮಾಯಿ ಈ ದಿನ ಸಂಚಾರ ಕೈಗೊಂಡು ಕೆಟ್ಟ ದೆವ್ವಗಳಿಂದ ಊರು ಕಾಯುತ್ತಾಳೆ. ಬಹುಶಃ ನಾಯಿಗಳಿಗೆ ತಾಯಿಯೇ ಕಂಡಿರಬೇಕೆಂದು ಜನ ಭಾವಿಸಿಕೊಂಡು ಮತ್ತೆ ಮಲಗಿದರು.
ಆದರೆ ನಾಯೆಲ್ಯಾ ಈ ಸಂದರ್ಭ ಬಳಸಿಕೊಂಡ. ಯಾರು ಏನೆಂದು ಜನ ಹುಯ್ಯಲೆದ್ದಾಗಲೇ ಈತ ಮಾದರ ಭರಮನ ಗುಡಿಸಲಿಗೆ ನುಗ್ಗಿ ಪಡಸಾಲೆಯ ಕೋಳೀ ಬುಟ್ಟಿಗೆ ಕೈಹಾಕಿ, ಸಪ್ಪಳ ಮಾಡದೆ ಒಂದು ಕೋಳೀ ತಂದು ಅದರ ಕತ್ತು ಹಿಸುಕಿ ತನ್ನ ಗುಡಿಸಲಲ್ಲಿಟ್ಟು ಮತ್ತೆ ಸಾಜೋಗರಂತೆ ಹೊರಬಂದು, ಯಾರು? ಏನು? ಎಂದು ಎಲ್ಲರಂತೆ ಸೋಜಿಗ ನಟಿಸುತ್ತ ಅವರ ಜೊತೆ ನಿಂತ. ಕೆಲಹೊತ್ತಾಗಿ ಒಳಗೆ ಬಂದರೆ ರಂಗಿ, ಆ ಹೊತ್ತಿನಲ್ಲೇ ಎದ್ದು ಆಗಲೇ ನೀರು ಕಾಸಿ ಕೋಳಿ ಅದ್ದಿಬಿಟ್ಟಿದ್ದಳು. ಬೆಳಗಾಗುವುದರೊಳಗೆ, ತನ್ನ ಹೆಂಡತಿಗೂ ಗೊತ್ತಿಲ್ಲದಂತೆ ಕೋಳಿ ಮುಗಿಸಿಬಿಡಬೇಕೆದು ಇವನ ಲೆಕ್ಕ. ರಂಗಿ ನಾಯಲ್ಯಾನ ಹೆಂಡತಿಯಲ್ಲವೆ? ಒತ್ತಿ ಬಂದ ನಿರಾಸೆ, ಸಿಟ್ಟು ತಡಕೊಂಡು ಒಲೆಯ ಮುಂದೆ ಕೂತ.
ತುಸು ಹೊತ್ತು ಕೂರುವುದರಲ್ಲೇ ಕುದಿಯಿತೋ ಇಲ್ಲವೋ ನೋಡೋಣವೆಂದು ಒಂದು ಹೋಳು ತೆಗೆದು ರಂಗೀ ಹಾಗೇ ತಿಂದಳು ಈಗ ಕೋಪ ಅಸಹನೀಯವಾಯಿತು.
“ಏ ಬೇಬರಿಸಿ, ಕದ್ದುಕೊಂಬಂದವ ನಾನು. ನನಗ ತೋರಿಸದ ಬಕ್ಕರಸಾಕ ಸುರು ಮಾಡಿದಿ?’
“ಸುಮ್ ಕುಂದರಬಾರದ? ಕುದ್ದsತ್ಯೋ ಇಲ್ಲೊ ನೋಡತೀನಿ”
“ಯಾಕ? ನನಗ ತಿಳೀತಿರಲಿಲ್ಲೆನು?”
“ಏ ಭಾಡ್ಯಾ, ಬಾಯಿ ಮುಚ್ಚಿಕೊಂಡು ಕುಂದರತೀಯಾ? ಮಾದರ ಭರಮ್ಯಾಗ ಹೇಳಂತೀಯಾ?”
ಎನ್ನತ್ತಾ ಇನ್ನೊಂದು ಹೋಳು ತಿಂದಳು. ಬಾಯಿ ಮಾಡುವಂತಿಲ್ಲ, ಬಿಡುವಂತಿಲ್ಲ. ಬಾಯಿ ಮಾಡಿದರೆ ರಂಪಾಟ ಮಾಡಿ ಭರಮ್ಯಾನಿಗೆ ಹೇಳಿದರೆ ಆಶ್ಚರ್ಯವಿಲ್ಲ. ಬಾಯಿ ಮುಚ್ಚಿಕೊಂಡಿದ್ದರೆ ಕುದಿಯುವ ಮೊದಲೆ ಈ ರಂಡಿ ಗಡಿಗೆಯ ಬುಡಸಮೇತ ಮುಗಿಸಿಬುಡುವುದರಲ್ಲಿ ಸಂಶಯವಿಲ್ಲ. ಆಗಲೆಂದು ಇವನೂ ಒಂದು ಹೋಳು ತಿಂದ. ಸೇಡಿನೆಂದೆಂಬಂತೆ ಅವಳೂ ತಿಂದಳು. ಇವನೂ ತಿಂದ. ಹೀಗೆ ಕುದ್ದಿದೆಯೋ, ಅಲ್ಲವೋ ನೋಡುವುದರಲ್ಲೇ ಅರ್ಧ ಕೋಳಿ ಮುಗಿಯಿತು. ಕುದಿಸಿ ಮಸಾಲೆ ಹಾಕಿ, ಚಂದಾ ಮಾಡಿ ತಿನ್ನುವುದು ಹಾಗಿರಲಿ, ಬರೀ ಕುದಿಯುತ್ತಿದ್ದ ಮಾಂಸ ಕೂಡ ತನಗೆ ಸರಿಯಾಗಿ ಸಿಗುತ್ತಿಲ್ಲ, ಎನಿಸಿತು. ಈ ಸ್ಪರ್ಧೆಯಲ್ಲಿ ರಂಗಿ ಸರಿಯಾಗಿ ಮೂಳೆ ಕೂಡ ಉಗುಳುತ್ತಿರಲಿಲ್ಲ! ಏನೋ ಕೊನೆಯ ಉಪಾಯವೆಂದು “ಏ, ಹಾದರಗಿತ್ತಿ, ಕೂಸಿಗೊಂದೀಟ ಬಿಡತೀಯೋ ಇಲ್ಲೋ?” ಅಂದ.
“ರಸ ಕೊಟ್ಟರಾತ ಬಿಡs” ಎನ್ನುತ್ತ ಮತ್ತೆ ಮುಕ್ಕಿದಳು. ಇನ್ನು ತನಗೊಂದು ಮೂಳೆಯೂ ದಕ್ಕುವುದಿಲ್ಲವೆಂದು ಖಾತ್ರಿಯಾಗಿ ತಕ್ಷಣವೇ ಅವಳ ಕೈ ಹಿಡಿದು, “ಇನ್ನೊಂದು ತುತ್ತ ಬಾಯಿಗೆ ಹಾಕಿದರ ಕರಿಮಾಯಿ ಆಣಿ” ಅಂದ. ಅವಳೂ ಇವನಿಗೆ ಕರಿಮಾಯಿ ಆಣೆ ಹಾಕಿದಳು. ಒಗ್ಗರಣೆ ಹಾಕಿ ಪಲ್ಯ ಮಾಡುವ ತನಕ ಯಾರೂ ಮಾಂಸ ಮುಟ್ಟಕೂಡದೆಂದಾಯಿತು. ಆದರೆ ಆಣೆ ಪಾಲಿಸುವದರ ಬಗ್ಗೆ ಇಬ್ಬರಿಗೂ ನಂಬಿಕೆಯಿಲ್ಲ. ಆಣೆಯ ಭರಾಟೆಯಲ್ಲಿ ನಾಯೆಲ್ಯಾ ರಂಗಿಗಿಂತ ಮಾಂಸದ ಗಡಿಗೆಗೆ ಹೆಚ್ಚು ಸಮೀಪ ಬಂದಿದ್ದ! ಗೊತ್ತಾದೊಡನೆ ಅವನು ತಿನ್ನದ ಹಾಗೆ, ಆದರೆ ಪ್ರೀತಿಯೆಂದೆಂಬಂತೆ ಗಪ್ಪನೆ ತನ್ನ ನಳಿದೋಳ್ಗಳಿಂದ ನಾಯೆಲ್ಯಾನನ್ನು ಬಳಸಿ ಈಚಲುಮರಕ್ಕೆ ಕಾಡುಬಳ್ಳಿ ಸುತ್ತಿದಂತೆ ತಬ್ಬಿಕೊಂಡು ಕೂತಳು.
ಮಾಂಸ ಕುದಿಯಿತು. ನೀರು ಬಸಿದು ಒಂದೆಡೆಯಿಟ್ಟು ಒಗ್ಗರಣೆ ತಯಾರಿ ನಡೆದಾಗ ಬಾಗಿಲಲ್ಲಿದ್ದ ಮುನಿಯೆಲ್ಯಾ ಗುರ್ ಎಂದಿತು. ಯಾರೋ ಬಂದದ್ದು ಸ್ಪಷ್ಟವಿತ್ತು. ಹೋಗಿ ಕದ ತೆಗೆದು ನೋಡೆಂದು ಹೆಂಡತಿಗೆ ಹೇಳಿದ. ನೀನೇ ನೋಡೆಂದು ಅವಳು ಹೇಳಿದಳು. ನೀನು ತಾನು ಎನ್ನುವಷ್ಟರಲ್ಲಿ ಗೌಡ “ಮುನಿಯೆಲ್ಯಾ” ಎಂದು ಕೂಗಿದ್ದು ಕೇಳಿಸಿತು. ಗಡಬಡಿಸಿ, ಬಿಟ್ಟು ಓಡಿಹೋದರೆ ಈ ಹಾಳು ರಂಡೆ ಮುಗಿಸಿಬಿಡಬಹುದೆಂದು ತಕ್ಷಣ ಅವಳ ಕೈ ಹಿಡಿದುಕೊಂಡೆ ಹೋಗಿ ಬಾಗಿಲು ತೆಗೆದ. ಹೊರಗಾಗಲೆ ಮೂಡಲು ಹರಿಯತೊಡಗಿತ್ತು.
ಹೊರಗೆ ಗೌಡ ನಿಂತಿದ್ದ. ಗೌಡನೆದುರಿಗೆ ಹೆಂಡತಿಯನ್ನು ಹೇಗೆ ಹಿಡಿದಿರುತ್ತಾನೆ? ಬಿಟ್ಟ. ಎಡೆ ಹೊಡೆಯಬೇಕೆಂದು ತಾಕೀತು ಮಾಡಿ ಗೌಡ ಹೋದ. ಅತ್ತ ಗೌಡ ಹೋದ. ಇತ್ತ ನಾಯೆಲ್ಯಾ ಬಿಟ್ಟಬಾಣದ ಹಾಗೆ, ಅವಸರದಿಂದ ಒಳಗೆ ಬಂದು ನೋಡಿದರೆ ರಂಗಿ ಎಲ್ಲಾ ಮಾಂಸ ಕಬಳಿಸಿ ಕಟಲ್ ಕಟಲ್ ಎಂದು ಮೂಳೆ ಜಗಿಯುತ್ತಿದ್ದಳು. ನಾಯೆಲ್ಯಾನಿಗೆ ಅಳು ಬರುವಷ್ಟು ಕೋಪ ಬಂತು. ‘ಹಾದರಗಿತ್ತೇ’ ಎಂದು ಹಾರಿ ಅವಳ ತುರುಬಿಗೇ ಕೈ ಹಾಕಿ ಒದ್ದ. ಅವಳೋ ಛೇ, ಈ ಹತಭಾಗ್ಯನ ಅಂಗೀಗೆ ಕೈ ಹಾಕಿದಳು. ಸಿಟ್ಟಿನ ಭರದಲ್ಲಿ ಅಂಗಿ ಗಮನಿಸದೆ ರಪ್ಪೆಂದು ಹೊಡೆದ. ಅವಳು ಟರ್ರ ಎಂದು ಅಂಗಿ ಹರಿದಳು ಇನ್ನಷ್ಟು ಕೋಪ, ಇನ್ನಷ್ಟು ನಿರಾಶೆ, ಇನ್ನಷ್ಟು ನೋವಿನಿಂದ ಇನ್ನಷ್ಟು ಹೊಡೆದ. ಅವಳು ಅಂಗಿಯನ್ನು ಇನ್ನಷ್ಟು ಹರಿದು ತ್ಯಾಪೆ ಹಚ್ಚಲಿಕ್ಕೂ ಆಗದಂತೆ ಚಿಂದಿ ಚಿಂದಿ ಮಾಡಿ ಎಸೆದಳು!
ನ್ಯಾಯೆಲ್ಯಾ ಎರಡನೇ ಅಂಗಿಯಿಂದಲೂ ವಂಚಿತನಾದ ಈ ಕಥೆ ಕೇಳಿ ಜನ ನಕ್ಕರು. ಅಂದಿನಿಂದ ಅಂಗೀಯೆಲ್ಯಾ ಎಂದೂ ಧಾರಾಳವಾಗಿ ಇನ್ನೊಮ್ಮೆ ನಾಮಕರಣ ಮಾಡಿದರು. ಆಮೇಲೆ ಅವನಿಗೆ ಗೌಡನ ಅಂಗಿಗಳೇ ಗತಿ! ಗೌಡನ ದೊಡ್ಡ ಅಂಗಿ ಇವನ ಸಣಕಲು ಮೈಗೆ ಜೋತುಬೀಳುತ್ತಿತ್ತು. ಆದರೂ ಆತ ಬೇರೆ ಹೊಸ ಅಂಗಿ ಬಯಸಲಿಲ್ಲ. ಬರಬರುತ್ತ ಗೌಡನ ಜೊತೆಯಲ್ಲಿದ್ದಾಗ ಅಂಗೀಯೆಲ್ಯಾನಿಗೆ ಒಮ್ಮೊಮ್ಮೆ ಅಂದರೆ ಕುಡಿದಾಗ ಹೆಮ್ಮೆ ಕೂಡ ಅನಿಸುತ್ತಿತ್ತು. ಆಗೆಲ್ಲ ತನ್ನ ಹೆಂಡತಿ ರಂಗಿಗೆ ರಂಗಾಸಾನಿ ಎಂದು ಬಾಯಿತುಂಬ ಕರೆಯುತ್ತಿದ್ದ.
ನಾಯೆಲ್ಯ ಅಂಗೀಯೆಲ್ಯಾ ಆದದ್ದು
ನಾಯೆಲ್ಯಾ ಬುದ್ಧಿಗಲಿತಾಗಿನಿಂದ ಹಾಕುತ್ತಿದ್ದುದು ಗೌಡನ ಹಳೆಯ ಅಂಗಿಗಳನ್ನೇ. ಅವನೊಮ್ಮೆಯೂ ಹೊಸ ಅಂಗಿ ಹೊಲಿಸಿಕೊಂಡವನೇ ಅಲ್ಲ. ಹೊಲಿಸಿಕೋ ಎಂದು ಕೊಟ್ಟರೂ ಕುಡಿಯುತ್ತಿದ್ದ. ಗೌಡನಿಗೆ ಬೇಸರವಾಯ್ತು. ಕತ್ತೆಯಂಥ ಕತ್ತೆ ಒಂದಾಣೆಯ ಹಗ್ಗ ಹರಿಯತ್ತದೆ. ನಾಯೆಲ್ಯಾ ಒಂದು ಅಂಗಿಯನ್ನಾದರೂ ಹರಿಯದಿದ್ದರೆ ಹೇಗೆ? ಅವನಳತೆಯ ಎರಡು ಹೊಸ ಅಂಗಿಗಳನ್ನು ಹೊಲಿಸಿಕೊಟ್ಟ.
ಹೊಸ ಅಂಗಿ ಹಾಕಿಕೊಂಡಾಗ ನಾಯಿಲ್ಯಾನನ್ನು ಹಿಡಿಯುವವರೇ ಇಲ್ಲ. ಊರ ತುಂಬ ವಿನಾಕಾರಣ ಅಡ್ಡಾಡಿ ಬಂದ. ಬರುಹೋಗುವವರ ಯೋಗಕ್ಷೇಮ ಕೇಳಿದ. ಕೆಲಸ ಮಾಡುವಾಗ ಅದನ್ನು ಕಳಚಿಟ್ಟಿದ್ದೇನು, ಹೆಂಡತಿ ಮುಟ್ಟ ಬಂದರೆ ಅವಳ ಹೊಲಸು ಕೈಗೆ ಮುನಿದದ್ದೇನು, ಮಲಗುವಾಗ ಕಂಬಳಿ ಝಾಡಿಸಿ ಝಾಡಿಸಿ ಹಾಸಿಕೊಂಡದ್ದೇನು! ಇವನ ಸಡಗರಕ್ಕೆ ಕೊಂಬು ಮೂಡಿಸಂತೆ ಸಾವಳಗಿಯ ಜಾತ್ರೆ ಬಂತು. ಊರಿಗಿಂತ ಮುಂಚೆಯೇ ಹೋದ, ಅಡ್ಡಾಡಿದ. ಜಾತ್ರೆಯ ಪ್ರತಿಯೊಬ್ಬರ ಅಂಗಿಯ ಜೊತೆ ತನ್ನ ಅಂಗಿ ಹೋಲಿಸಿಕೊಂಡ. ಆಯಿತು. ಜಾತ್ರೆಯೆಲ್ಲಾ ಮುಗಿದು ಮಾರನೇ ದಿನ ಗುಡಿಸಲಿಗೆ ಬಂದ, ನೋಡಿದರೆ ಬರೀ ಲಂಗೋಟಿಯಲ್ಲೇ ಇದ್ದ! ರಂಗಿ ಯಾಕೆಂದು ಕೇಳಿದರೆ ಹೀಗಾಯಿತಂತೆ:
ರಾತ್ರಿ ಬಯಲಾಟಕ್ಕೆ ಶೂದ್ರರ ಬಳಗದಲ್ಲಿ ಹೋಗಿ ಮುಂದಾಗಿಯೇ ಕೂತನಂತೆ. ಫಕ್ಕನೆ ಅಂಗಿಯ ಬಗ್ಗೆ ಚಿಂತೆ ಮೂಡಿತು. ಮಠದ ಹುಗ್ಗೀ ಪ್ರಸಾದ ಹೊಟ್ಟೆತುಂಬ ಗಚ್ಚಿನಂತೆ ಗಟ್ಟಿಯಾಗಿ ಇಳಿದಿತ್ತು. ಗೌಡ ಜಾತ್ರೆಗೆಂದು ಕೊಟ್ಟ ಚವಲಿಯಿಂದ ಹೆಂಡ ಕುಡಿದಿದ್ದ. ಅಂಗಿಯ ಸಡಗರದಲ್ಲಿ ಹೆಚ್ಚಾಗಿಯೇ ಓಡಾಡಿದ್ದ. ಮಂಪರು ಬಂದು ಕಣ್ಣುಮುಚ್ಚತೊಡಗಿದವು. ಸುತ್ತ ನೋಡಿದರೆ ಒಬ್ಬ ಶೂದ್ರನಿಗೂ ಮೈಮೇಲೆ ತನ್ನಂಥ ಅಂಗಿಯಿಲ್ಲ. ಒಮ್ಮೆ ನಿದ್ದೆ ಹತ್ತಿತೋ – ತನ್ನ ನಿದ್ದೆ ಸಾಮಾನ್ಯವೆ? ಮರದ ತುಂಡಿನಂತೆ ಬಿದ್ದ – ಎನ್ನೋಣ, ಆಮೇಲೆ ತನ್ನ ಅಂಗಿಯನ್ನು ಯಾರಾದರೂ ಕಳಚಿಕೊಂಡರೆ? ನಿದ್ದೆ ಮಾಡುವುದೇ – ಬೇಡ ಎನ್ನೋಣ. ಬರೋ ನಿದ್ದೆ ಹೇಳಿ ಕೇಳಿ ತನ್ನಪ್ಪಣೆ ಕೇಳಿ ಬರುತ್ತದೋ? ಆದ್ದರಿಂದ ಅಂಗೀ ಕಳಚಿ ಬಗಲಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಬಯಲಾಟ ನೋಡಿದರೆ, ಮೈಗೆ ತಂಗಾಳಿ ಸವರಿ ಇತ್ತ ನಿದ್ದೆಯೂ ಬರುವುದಿಲ್ಲ; ಒಂದು ವೇಳೆ ಬಂದರೂ ಬಗಲಲ್ಲಿಯ ಅಂಗಿಯನ್ನಾದರೂ ಕಿತ್ತುಕೊಳ್ಳುವಾಗ ತನಗೆ ಎಚ್ಚರವಾಗೇ ಆಗುತ್ತದೆ! ಹೀಗೆಂದುಕೊಂಡು ಅಂಗೀ ಕಳಚಿ ಮುದ್ದೆಮಾಡಿ ಬಗಲಲ್ಲಿ ಗಟ್ಟಿಯಾಗಿ ಹಿಡಿದು, ಅವಚಿಕೊಂಡು ಕೂತ. ನಿದ್ದೆಯೂ ಬಂತು. ಮುಂದಿನ ಕತೆ ನಿಮಗೆ ಗೊತ್ತೇ ಇದೆ. ನಾಯಲ್ಯಾ ತನ್ನ ಮೊದಲನೇ ಅಂಗಿ ಕಳಕೊಂಡದ್ದು ಹೀಗೆ.
ಒಂದು ಸಲ ‘ಮುನಿಯೆಲ್ಯಾ’ ಅಂದರೆ ಅದೇ ಅವನ ಕರಿನಾಯಿ ಇತ್ತಲ್ಲಾ, ಅದಕ್ಕೆ ಅದೇನು ಸ್ಫೂರ್ತಿ ಉಕ್ಕಿತೋ ಮಧ್ಯರಾತ್ರಿ, ಅಮಾವಾಸ್ಯೆ ಕತ್ತಲಲ್ಲಿ ಜೋರಿನಿಂದ, ಊರ ನಿಶ್ಯಬ್ದತೆ ಸೀಳಿ ಎರಡಾಗುವಂತೆ ಕಿರಿಚಿತು. ಕೇಳಿದ ಊರ ನಾಯಿಗಳು ಫಕ್ಕನೆ ಎಚ್ಚತ್ತು ತಂತಮ್ಮ ಸ್ಥಳಗಳಲ್ಲೇ ನಿಂತುಕೊಂಡು ಹೊಲಗೇರಿಯ ಕಡೆ ಮುಖಮಾಡಿ, ಜಿಗ್ಗಾಲು ಕೊಟ್ಟು ಕೂಗಲಾರಂಭಿಸಿದವು. ಎಷ್ಟು ಹೊತ್ತಾದರೂ ಅವುಗಳ ಸೊಲ್ಲು ನಿಲ್ಲಲೊಲ್ಲದು. ಯಾರೋ ಕಳ್ಳ ನುಗ್ಗಿರಬೇಕೆಂದು ಮಲಗಿದ್ದವರು ಎದ್ದರು. ನೋಡಿದರೆ ಯಾರೂ ಇರಲಿಲ್ಲ. ಅವಾವಾಸ್ಯೆಯಲ್ಲವೆ? ಕರಿಮಾಯಿ ಈ ದಿನ ಸಂಚಾರ ಕೈಗೊಂಡು ಕೆಟ್ಟ ದೆವ್ವಗಳಿಂದ ಊರು ಕಾಯುತ್ತಾಳೆ. ಬಹುಶಃ ನಾಯಿಗಳಿಗೆ ತಾಯಿಯೇ ಕಂಡಿರಬೇಕೆಂದು ಜನ ಭಾವಿಸಿಕೊಂಡು ಮತ್ತೆ ಮಲಗಿದರು.
ಆದರೆ ನಾಯೆಲ್ಯಾ ಈ ಸಂದರ್ಭ ಬಳಸಿಕೊಂಡ. ಯಾರು ಏನೆಂದು ಜನ ಹುಯ್ಯಲೆದ್ದಾಗಲೇ ಈತ ಮಾದರ ಭರಮನ ಗುಡಿಸಲಿಗೆ ನುಗ್ಗಿ ಪಡಸಾಲೆಯ ಕೋಳೀ ಬುಟ್ಟಿಗೆ ಕೈಹಾಕಿ, ಸಪ್ಪಳ ಮಾಡದೆ ಒಂದು ಕೋಳೀ ತಂದು ಅದರ ಕತ್ತು ಹಿಸುಕಿ ತನ್ನ ಗುಡಿಸಲಲ್ಲಿಟ್ಟು ಮತ್ತೆ ಸಾಜೋಗರಂತೆ ಹೊರಬಂದು, ಯಾರು? ಏನು? ಎಂದು ಎಲ್ಲರಂತೆ ಸೋಜಿಗ ನಟಿಸುತ್ತ ಅವರ ಜೊತೆ ನಿಂತ. ಕೆಲಹೊತ್ತಾಗಿ ಒಳಗೆ ಬಂದರೆ ರಂಗಿ, ಆ ಹೊತ್ತಿನಲ್ಲೇ ಎದ್ದು ಆಗಲೇ ನೀರು ಕಾಸಿ ಕೋಳಿ ಅದ್ದಿಬಿಟ್ಟಿದ್ದಳು. ಬೆಳಗಾಗುವುದರೊಳಗೆ, ತನ್ನ ಹೆಂಡತಿಗೂ ಗೊತ್ತಿಲ್ಲದಂತೆ ಕೋಳಿ ಮುಗಿಸಿಬಿಡಬೇಕೆದು ಇವನ ಲೆಕ್ಕ. ರಂಗಿ ನಾಯಲ್ಯಾನ ಹೆಂಡತಿಯಲ್ಲವೆ? ಒತ್ತಿ ಬಂದ ನಿರಾಸೆ, ಸಿಟ್ಟು ತಡಕೊಂಡು ಒಲೆಯ ಮುಂದೆ ಕೂತ.
ತುಸು ಹೊತ್ತು ಕೂರುವುದರಲ್ಲೇ ಕುದಿಯಿತೋ ಇಲ್ಲವೋ ನೋಡೋಣವೆಂದು ಒಂದು ಹೋಳು ತೆಗೆದು ರಂಗೀ ಹಾಗೇ ತಿಂದಳು ಈಗ ಕೋಪ ಅಸಹನೀಯವಾಯಿತು.
“ಏ ಬೇಬರಿಸಿ, ಕದ್ದುಕೊಂಬಂದವ ನಾನು. ನನಗ ತೋರಿಸದ ಬಕ್ಕರಸಾಕ ಸುರು ಮಾಡಿದಿ?’
“ಸುಮ್ ಕುಂದರಬಾರದ? ಕುದ್ದsತ್ಯೋ ಇಲ್ಲೊ ನೋಡತೀನಿ”
“ಯಾಕ? ನನಗ ತಿಳೀತಿರಲಿಲ್ಲೆನು?”
“ಏ ಭಾಡ್ಯಾ, ಬಾಯಿ ಮುಚ್ಚಿಕೊಂಡು ಕುಂದರತೀಯಾ? ಮಾದರ ಭರಮ್ಯಾಗ ಹೇಳಂತೀಯಾ?”
ಎನ್ನತ್ತಾ ಇನ್ನೊಂದು ಹೋಳು ತಿಂದಳು. ಬಾಯಿ ಮಾಡುವಂತಿಲ್ಲ, ಬಿಡುವಂತಿಲ್ಲ. ಬಾಯಿ ಮಾಡಿದರೆ ರಂಪಾಟ ಮಾಡಿ ಭರಮ್ಯಾನಿಗೆ ಹೇಳಿದರೆ ಆಶ್ಚರ್ಯವಿಲ್ಲ. ಬಾಯಿ ಮುಚ್ಚಿಕೊಂಡಿದ್ದರೆ ಕುದಿಯುವ ಮೊದಲೆ ಈ ರಂಡಿ ಗಡಿಗೆಯ ಬುಡಸಮೇತ ಮುಗಿಸಿಬುಡುವುದರಲ್ಲಿ ಸಂಶಯವಿಲ್ಲ. ಆಗಲೆಂದು ಇವನೂ ಒಂದು ಹೋಳು ತಿಂದ. ಸೇಡಿನೆಂದೆಂಬಂತೆ ಅವಳೂ ತಿಂದಳು. ಇವನೂ ತಿಂದ. ಹೀಗೆ ಕುದ್ದಿದೆಯೋ, ಅಲ್ಲವೋ ನೋಡುವುದರಲ್ಲೇ ಅರ್ಧ ಕೋಳಿ ಮುಗಿಯಿತು. ಕುದಿಸಿ ಮಸಾಲೆ ಹಾಕಿ, ಚಂದಾ ಮಾಡಿ ತಿನ್ನುವುದು ಹಾಗಿರಲಿ, ಬರೀ ಕುದಿಯುತ್ತಿದ್ದ ಮಾಂಸ ಕೂಡ ತನಗೆ ಸರಿಯಾಗಿ ಸಿಗುತ್ತಿಲ್ಲ, ಎನಿಸಿತು. ಈ ಸ್ಪರ್ಧೆಯಲ್ಲಿ ರಂಗಿ ಸರಿಯಾಗಿ ಮೂಳೆ ಕೂಡ ಉಗುಳುತ್ತಿರಲಿಲ್ಲ! ಏನೋ ಕೊನೆಯ ಉಪಾಯವೆಂದು “ಏ, ಹಾದರಗಿತ್ತಿ, ಕೂಸಿಗೊಂದೀಟ ಬಿಡತೀಯೋ ಇಲ್ಲೋ?” ಅಂದ.
“ರಸ ಕೊಟ್ಟರಾತ ಬಿಡs” ಎನ್ನುತ್ತ ಮತ್ತೆ ಮುಕ್ಕಿದಳು. ಇನ್ನು ತನಗೊಂದು ಮೂಳೆಯೂ ದಕ್ಕುವುದಿಲ್ಲವೆಂದು ಖಾತ್ರಿಯಾಗಿ ತಕ್ಷಣವೇ ಅವಳ ಕೈ ಹಿಡಿದು, “ಇನ್ನೊಂದು ತುತ್ತ ಬಾಯಿಗೆ ಹಾಕಿದರ ಕರಿಮಾಯಿ ಆಣಿ” ಅಂದ. ಅವಳೂ ಇವನಿಗೆ ಕರಿಮಾಯಿ ಆಣೆ ಹಾಕಿದಳು. ಒಗ್ಗರಣೆ ಹಾಕಿ ಪಲ್ಯ ಮಾಡುವ ತನಕ ಯಾರೂ ಮಾಂಸ ಮುಟ್ಟಕೂಡದೆಂದಾಯಿತು. ಆದರೆ ಆಣೆ ಪಾಲಿಸುವದರ ಬಗ್ಗೆ ಇಬ್ಬರಿಗೂ ನಂಬಿಕೆಯಿಲ್ಲ. ಆಣೆಯ ಭರಾಟೆಯಲ್ಲಿ ನಾಯೆಲ್ಯಾ ರಂಗಿಗಿಂತ ಮಾಂಸದ ಗಡಿಗೆಗೆ ಹೆಚ್ಚು ಸಮೀಪ ಬಂದಿದ್ದ! ಗೊತ್ತಾದೊಡನೆ ಅವನು ತಿನ್ನದ ಹಾಗೆ, ಆದರೆ ಪ್ರೀತಿಯೆಂದೆಂಬಂತೆ ಗಪ್ಪನೆ ತನ್ನ ನಳಿದೋಳ್ಗಳಿಂದ ನಾಯೆಲ್ಯಾನನ್ನು ಬಳಸಿ ಈಚಲುಮರಕ್ಕೆ ಕಾಡುಬಳ್ಳಿ ಸುತ್ತಿದಂತೆ ತಬ್ಬಿಕೊಂಡು ಕೂತಳು.
ಮಾಂಸ ಕುದಿಯಿತು. ನೀರು ಬಸಿದು ಒಂದೆಡೆಯಿಟ್ಟು ಒಗ್ಗರಣೆ ತಯಾರಿ ನಡೆದಾಗ ಬಾಗಿಲಲ್ಲಿದ್ದ ಮುನಿಯೆಲ್ಯಾ ಗುರ್ ಎಂದಿತು. ಯಾರೋ ಬಂದದ್ದು ಸ್ಪಷ್ಟವಿತ್ತು. ಹೋಗಿ ಕದ ತೆಗೆದು ನೋಡೆಂದು ಹೆಂಡತಿಗೆ ಹೇಳಿದ. ನೀನೇ ನೋಡೆಂದು ಅವಳು ಹೇಳಿದಳು. ನೀನು ತಾನು ಎನ್ನುವಷ್ಟರಲ್ಲಿ ಗೌಡ “ಮುನಿಯೆಲ್ಯಾ” ಎಂದು ಕೂಗಿದ್ದು ಕೇಳಿಸಿತು. ಗಡಬಡಿಸಿ, ಬಿಟ್ಟು ಓಡಿಹೋದರೆ ಈ ಹಾಳು ರಂಡೆ ಮುಗಿಸಿಬಿಡಬಹುದೆಂದು ತಕ್ಷಣ ಅವಳ ಕೈ ಹಿಡಿದುಕೊಂಡೆ ಹೋಗಿ ಬಾಗಿಲು ತೆಗೆದ. ಹೊರಗಾಗಲೆ ಮೂಡಲು ಹರಿಯತೊಡಗಿತ್ತು.
ಹೊರಗೆ ಗೌಡ ನಿಂತಿದ್ದ. ಗೌಡನೆದುರಿಗೆ ಹೆಂಡತಿಯನ್ನು ಹೇಗೆ ಹಿಡಿದಿರುತ್ತಾನೆ? ಬಿಟ್ಟ. ಎಡೆ ಹೊಡೆಯಬೇಕೆಂದು ತಾಕೀತು ಮಾಡಿ ಗೌಡ ಹೋದ. ಅತ್ತ ಗೌಡ ಹೋದ. ಇತ್ತ ನಾಯೆಲ್ಯಾ ಬಿಟ್ಟಬಾಣದ ಹಾಗೆ, ಅವಸರದಿಂದ ಒಳಗೆ ಬಂದು ನೋಡಿದರೆ ರಂಗಿ ಎಲ್ಲಾ ಮಾಂಸ ಕಬಳಿಸಿ ಕಟಲ್ ಕಟಲ್ ಎಂದು ಮೂಳೆ ಜಗಿಯುತ್ತಿದ್ದಳು. ನಾಯೆಲ್ಯಾನಿಗೆ ಅಳು ಬರುವಷ್ಟು ಕೋಪ ಬಂತು. ‘ಹಾದರಗಿತ್ತೇ’ ಎಂದು ಹಾರಿ ಅವಳ ತುರುಬಿಗೇ ಕೈ ಹಾಕಿ ಒದ್ದ. ಅವಳೋ ಛೇ, ಈ ಹತಭಾಗ್ಯನ ಅಂಗೀಗೆ ಕೈ ಹಾಕಿದಳು. ಸಿಟ್ಟಿನ ಭರದಲ್ಲಿ ಅಂಗಿ ಗಮನಿಸದೆ ರಪ್ಪೆಂದು ಹೊಡೆದ. ಅವಳು ಟರ್ರ ಎಂದು ಅಂಗಿ ಹರಿದಳು ಇನ್ನಷ್ಟು ಕೋಪ, ಇನ್ನಷ್ಟು ನಿರಾಶೆ, ಇನ್ನಷ್ಟು ನೋವಿನಿಂದ ಇನ್ನಷ್ಟು ಹೊಡೆದ. ಅವಳು ಅಂಗಿಯನ್ನು ಇನ್ನಷ್ಟು ಹರಿದು ತ್ಯಾಪೆ ಹಚ್ಚಲಿಕ್ಕೂ ಆಗದಂತೆ ಚಿಂದಿ ಚಿಂದಿ ಮಾಡಿ ಎಸೆದಳು!
ನ್ಯಾಯೆಲ್ಯಾ ಎರಡನೇ ಅಂಗಿಯಿಂದಲೂ ವಂಚಿತನಾದ ಈ ಕಥೆ ಕೇಳಿ ಜನ ನಕ್ಕರು. ಅಂದಿನಿಂದ ಅಂಗೀಯೆಲ್ಯಾ ಎಂದೂ ಧಾರಾಳವಾಗಿ ಇನ್ನೊಮ್ಮೆ ನಾಮಕರಣ ಮಾಡಿದರು. ಆಮೇಲೆ ಅವನಿಗೆ ಗೌಡನ ಅಂಗಿಗಳೇ ಗತಿ! ಗೌಡನ ದೊಡ್ಡ ಅಂಗಿ ಇವನ ಸಣಕಲು ಮೈಗೆ ಜೋತುಬೀಳುತ್ತಿತ್ತು. ಆದರೂ ಆತ ಬೇರೆ ಹೊಸ ಅಂಗಿ ಬಯಸಲಿಲ್ಲ. ಬರಬರುತ್ತ ಗೌಡನ ಜೊತೆಯಲ್ಲಿದ್ದಾಗ ಅಂಗೀಯೆಲ್ಯಾನಿಗೆ ಒಮ್ಮೊಮ್ಮೆ ಅಂದರೆ ಕುಡಿದಾಗ ಹೆಮ್ಮೆ ಕೂಡ ಅನಿಸುತ್ತಿತ್ತು. ಆಗೆಲ್ಲ ತನ್ನ ಹೆಂಡತಿ ರಂಗಿಗೆ ರಂಗಾಸಾನಿ ಎಂದು ಬಾಯಿತುಂಬ ಕರೆಯುತ್ತಿದ್ದ.
ನಾಯೆಲ್ಯ ಅಂಗೀಯೆಲ್ಯಾ ಆದದ್ದು
ನಾಯೆಲ್ಯಾ ಬುದ್ಧಿಗಲಿತಾಗಿನಿಂದ ಹಾಕುತ್ತಿದ್ದುದು ಗೌಡನ ಹಳೆಯ ಅಂಗಿಗಳನ್ನೇ. ಅವನೊಮ್ಮೆಯೂ ಹೊಸ ಅಂಗಿ ಹೊಲಿಸಿಕೊಂಡವನೇ ಅಲ್ಲ. ಹೊಲಿಸಿಕೋ ಎಂದು ಕೊಟ್ಟರೂ ಕುಡಿಯುತ್ತಿದ್ದ. ಗೌಡನಿಗೆ ಬೇಸರವಾಯ್ತು. ಕತ್ತೆಯಂಥ ಕತ್ತೆ ಒಂದಾಣೆಯ ಹಗ್ಗ ಹರಿಯತ್ತದೆ. ನಾಯೆಲ್ಯಾ ಒಂದು ಅಂಗಿಯನ್ನಾದರೂ ಹರಿಯದಿದ್ದರೆ ಹೇಗೆ? ಅವನಳತೆಯ ಎರಡು ಹೊಸ ಅಂಗಿಗಳನ್ನು ಹೊಲಿಸಿಕೊಟ್ಟ.
ಹೊಸ ಅಂಗಿ ಹಾಕಿಕೊಂಡಾಗ ನಾಯಿಲ್ಯಾನನ್ನು ಹಿಡಿಯುವವರೇ ಇಲ್ಲ. ಊರ ತುಂಬ ವಿನಾಕಾರಣ ಅಡ್ಡಾಡಿ ಬಂದ. ಬರುಹೋಗುವವರ ಯೋಗಕ್ಷೇಮ ಕೇಳಿದ. ಕೆಲಸ ಮಾಡುವಾಗ ಅದನ್ನು ಕಳಚಿಟ್ಟಿದ್ದೇನು, ಹೆಂಡತಿ ಮುಟ್ಟ ಬಂದರೆ ಅವಳ ಹೊಲಸು ಕೈಗೆ ಮುನಿದದ್ದೇನು, ಮಲಗುವಾಗ ಕಂಬಳಿ ಝಾಡಿಸಿ ಝಾಡಿಸಿ ಹಾಸಿಕೊಂಡದ್ದೇನು! ಇವನ ಸಡಗರಕ್ಕೆ ಕೊಂಬು ಮೂಡಿಸಂತೆ ಸಾವಳಗಿಯ ಜಾತ್ರೆ ಬಂತು. ಊರಿಗಿಂತ ಮುಂಚೆಯೇ ಹೋದ, ಅಡ್ಡಾಡಿದ. ಜಾತ್ರೆಯ ಪ್ರತಿಯೊಬ್ಬರ ಅಂಗಿಯ ಜೊತೆ ತನ್ನ ಅಂಗಿ ಹೋಲಿಸಿಕೊಂಡ. ಆಯಿತು. ಜಾತ್ರೆಯೆಲ್ಲಾ ಮುಗಿದು ಮಾರನೇ ದಿನ ಗುಡಿಸಲಿಗೆ ಬಂದ, ನೋಡಿದರೆ ಬರೀ ಲಂಗೋಟಿಯಲ್ಲೇ ಇದ್ದ! ರಂಗಿ ಯಾಕೆಂದು ಕೇಳಿದರೆ ಹೀಗಾಯಿತಂತೆ:
ರಾತ್ರಿ ಬಯಲಾಟಕ್ಕೆ ಶೂದ್ರರ ಬಳಗದಲ್ಲಿ ಹೋಗಿ ಮುಂದಾಗಿಯೇ ಕೂತನಂತೆ. ಫಕ್ಕನೆ ಅಂಗಿಯ ಬಗ್ಗೆ ಚಿಂತೆ ಮೂಡಿತು. ಮಠದ ಹುಗ್ಗೀ ಪ್ರಸಾದ ಹೊಟ್ಟೆತುಂಬ ಗಚ್ಚಿನಂತೆ ಗಟ್ಟಿಯಾಗಿ ಇಳಿದಿತ್ತು. ಗೌಡ ಜಾತ್ರೆಗೆಂದು ಕೊಟ್ಟ ಚವಲಿಯಿಂದ ಹೆಂಡ ಕುಡಿದಿದ್ದ. ಅಂಗಿಯ ಸಡಗರದಲ್ಲಿ ಹೆಚ್ಚಾಗಿಯೇ ಓಡಾಡಿದ್ದ. ಮಂಪರು ಬಂದು ಕಣ್ಣುಮುಚ್ಚತೊಡಗಿದವು. ಸುತ್ತ ನೋಡಿದರೆ ಒಬ್ಬ ಶೂದ್ರನಿಗೂ ಮೈಮೇಲೆ ತನ್ನಂಥ ಅಂಗಿಯಿಲ್ಲ. ಒಮ್ಮೆ ನಿದ್ದೆ ಹತ್ತಿತೋ – ತನ್ನ ನಿದ್ದೆ ಸಾಮಾನ್ಯವೆ? ಮರದ ತುಂಡಿನಂತೆ ಬಿದ್ದ – ಎನ್ನೋಣ, ಆಮೇಲೆ ತನ್ನ ಅಂಗಿಯನ್ನು ಯಾರಾದರೂ ಕಳಚಿಕೊಂಡರೆ? ನಿದ್ದೆ ಮಾಡುವುದೇ – ಬೇಡ ಎನ್ನೋಣ. ಬರೋ ನಿದ್ದೆ ಹೇಳಿ ಕೇಳಿ ತನ್ನಪ್ಪಣೆ ಕೇಳಿ ಬರುತ್ತದೋ? ಆದ್ದರಿಂದ ಅಂಗೀ ಕಳಚಿ ಬಗಲಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಬಯಲಾಟ ನೋಡಿದರೆ, ಮೈಗೆ ತಂಗಾಳಿ ಸವರಿ ಇತ್ತ ನಿದ್ದೆಯೂ ಬರುವುದಿಲ್ಲ; ಒಂದು ವೇಳೆ ಬಂದರೂ ಬಗಲಲ್ಲಿಯ ಅಂಗಿಯನ್ನಾದರೂ ಕಿತ್ತುಕೊಳ್ಳುವಾಗ ತನಗೆ ಎಚ್ಚರವಾಗೇ ಆಗುತ್ತದೆ! ಹೀಗೆಂದುಕೊಂಡು ಅಂಗೀ ಕಳಚಿ ಮುದ್ದೆಮಾಡಿ ಬಗಲಲ್ಲಿ ಗಟ್ಟಿಯಾಗಿ ಹಿಡಿದು, ಅವಚಿಕೊಂಡು ಕೂತ. ನಿದ್ದೆಯೂ ಬಂತು. ಮುಂದಿನ ಕತೆ ನಿಮಗೆ ಗೊತ್ತೇ ಇದೆ. ನಾಯಲ್ಯಾ ತನ್ನ ಮೊದಲನೇ ಅಂಗಿ ಕಳಕೊಂಡದ್ದು ಹೀಗೆ.
ಒಂದು ಸಲ ‘ಮುನಿಯೆಲ್ಯಾ’ ಅಂದರೆ ಅದೇ ಅವನ ಕರಿನಾಯಿ ಇತ್ತಲ್ಲಾ, ಅದಕ್ಕೆ ಅದೇನು ಸ್ಫೂರ್ತಿ ಉಕ್ಕಿತೋ ಮಧ್ಯರಾತ್ರಿ, ಅಮಾವಾಸ್ಯೆ ಕತ್ತಲಲ್ಲಿ ಜೋರಿನಿಂದ, ಊರ ನಿಶ್ಯಬ್ದತೆ ಸೀಳಿ ಎರಡಾಗುವಂತೆ ಕಿರಿಚಿತು. ಕೇಳಿದ ಊರ ನಾಯಿಗಳು ಫಕ್ಕನೆ ಎಚ್ಚತ್ತು ತಂತಮ್ಮ ಸ್ಥಳಗಳಲ್ಲೇ ನಿಂತುಕೊಂಡು ಹೊಲಗೇರಿಯ ಕಡೆ ಮುಖಮಾಡಿ, ಜಿಗ್ಗಾಲು ಕೊಟ್ಟು ಕೂಗಲಾರಂಭಿಸಿದವು. ಎಷ್ಟು ಹೊತ್ತಾದರೂ ಅವುಗಳ ಸೊಲ್ಲು ನಿಲ್ಲಲೊಲ್ಲದು. ಯಾರೋ ಕಳ್ಳ ನುಗ್ಗಿರಬೇಕೆಂದು ಮಲಗಿದ್ದವರು ಎದ್ದರು. ನೋಡಿದರೆ ಯಾರೂ ಇರಲಿಲ್ಲ. ಅವಾವಾಸ್ಯೆಯಲ್ಲವೆ? ಕರಿಮಾಯಿ ಈ ದಿನ ಸಂಚಾರ ಕೈಗೊಂಡು ಕೆಟ್ಟ ದೆವ್ವಗಳಿಂದ ಊರು ಕಾಯುತ್ತಾಳೆ. ಬಹುಶಃ ನಾಯಿಗಳಿಗೆ ತಾಯಿಯೇ ಕಂಡಿರಬೇಕೆಂದು ಜನ ಭಾವಿಸಿಕೊಂಡು ಮತ್ತೆ ಮಲಗಿದರು.
ಆದರೆ ನಾಯೆಲ್ಯಾ ಈ ಸಂದರ್ಭ ಬಳಸಿಕೊಂಡ. ಯಾರು ಏನೆಂದು ಜನ ಹುಯ್ಯಲೆದ್ದಾಗಲೇ ಈತ ಮಾದರ ಭರಮನ ಗುಡಿಸಲಿಗೆ ನುಗ್ಗಿ ಪಡಸಾಲೆಯ ಕೋಳೀ ಬುಟ್ಟಿಗೆ ಕೈಹಾಕಿ, ಸಪ್ಪಳ ಮಾಡದೆ ಒಂದು ಕೋಳೀ ತಂದು ಅದರ ಕತ್ತು ಹಿಸುಕಿ ತನ್ನ ಗುಡಿಸಲಲ್ಲಿಟ್ಟು ಮತ್ತೆ ಸಾಜೋಗರಂತೆ ಹೊರಬಂದು, ಯಾರು? ಏನು? ಎಂದು ಎಲ್ಲರಂತೆ ಸೋಜಿಗ ನಟಿಸುತ್ತ ಅವರ ಜೊತೆ ನಿಂತ. ಕೆಲಹೊತ್ತಾಗಿ ಒಳಗೆ ಬಂದರೆ ರಂಗಿ, ಆ ಹೊತ್ತಿನಲ್ಲೇ ಎದ್ದು ಆಗಲೇ ನೀರು ಕಾಸಿ ಕೋಳಿ ಅದ್ದಿಬಿಟ್ಟಿದ್ದಳು. ಬೆಳಗಾಗುವುದರೊಳಗೆ, ತನ್ನ ಹೆಂಡತಿಗೂ ಗೊತ್ತಿಲ್ಲದಂತೆ ಕೋಳಿ ಮುಗಿಸಿಬಿಡಬೇಕೆದು ಇವನ ಲೆಕ್ಕ. ರಂಗಿ ನಾಯಲ್ಯಾನ ಹೆಂಡತಿಯಲ್ಲವೆ? ಒತ್ತಿ ಬಂದ ನಿರಾಸೆ, ಸಿಟ್ಟು ತಡಕೊಂಡು ಒಲೆಯ ಮುಂದೆ ಕತ.
ತುಸು ಹೊತ್ತು ಕೂರುವುದರಲ್ಲೇ ಕುದಿಯಿತೋ ಇಲ್ಲವೋ ನೋಡೋಣವೆಂದು ಒಂದು ಹೋಳು ತೆಗೆದು ರಂಗೀ ಹಾಗೇ ತಿಂದಳು ಈಗ ಕೋಪ ಅಸಹನೀಯವಾಯಿತು.
“ಏ ಬೇಬರಿಸಿ, ಕದ್ದುಕೊಂಬಂದವ ನಾನು. ನನಗ ತೋರಿಸದ ಬಕ್ಕರಸಾಕ ಸುರು ಮಾಡಿದಿ?’
“ಸುಮ್ ಕುಂದರಬಾರದ? ಕುದ್ದsತ್ಯೋ ಇಲ್ಲೊ ನೋಡತೀನಿ”
“ಯಾಕ? ನನಗ ತಿಳೀತಿರಲಿಲ್ಲೆನು?”
“ಏ ಭಾಡ್ಯಾ, ಬಾಯಿ ಮುಚ್ಚಿಕೊಂಡು ಕುಂದರತೀಯಾ? ಮಾದರ ಭರಮ್ಯಾಗ ಹೇಳಂತೀಯಾ?”
ಎನ್ನತ್ತಾ ಇನ್ನೊಂದು ಹೋಳು ತಿಂದಳು. ಬಾಯಿ ಮಾಡುವಂತಿಲ್ಲ, ಬಿಡುವಂತಿಲ್ಲ. ಬಾಯಿ ಮಾಡಿದರೆ ರಂಪಾಟ ಮಾಡಿ ಭರಮ್ಯಾನಿಗೆ ಹೇಳಿದರೆ ಆಶ್ಚರ್ಯವಿಲ್ಲ. ಬಾಯಿ ಮುಚ್ಚಿಕೊಂಡಿದ್ದರೆ ಕುದಿಯುವ ಮೊದಲೆ ಈ ರಂಡಿ ಗಡಿಗೆಯ ಬುಡಸಮೇತ ಮುಗಿಸಿಬುಡುವುದರಲ್ಲಿ ಸಂಶಯವಿಲ್ಲ. ಆಗಲೆಂದು ಇವನೂ ಒಂದು ಹೋಳು ತಿಂದ. ಸೇಡಿನೆಂದೆಂಬಂತೆ ಅವಳೂ ತಿಂದಳು. ಇವನೂ ತಿಂದ. ಹೀಗೆ ಕುದ್ದಿದೆಯೋ, ಅಲ್ಲವೋ ನೋಡುವುದರಲ್ಲೇ ಅರ್ಧ ಕೋಳಿ ಮುಗಿಯಿತು. ಕುದಿಸಿ ಮಸಾಲೆ ಹಾಕಿ, ಚಂದಾ ಮಾಡಿ ತಿನ್ನುವುದು ಹಾಗಿರಲಿ, ಬರೀ ಕುದಿಯುತ್ತಿದ್ದ ಮಾಂಸ ಕೂಡ ತನಗೆ ಸರಿಯಾಗಿ ಸಿಗುತ್ತಿಲ್ಲ, ಎನಿಸಿತು. ಈ ಸ್ಪರ್ಧೆಯಲ್ಲಿ ರಂಗಿ ಸರಿಯಾಗಿ ಮೂಳೆ ಕೂಡ ಉಗುಳುತ್ತಿರಲಿಲ್ಲ! ಏನೋ ಕೊನೆಯ ಉಪಾಯವೆಂದು “ಏ, ಹಾದರಗಿತ್ತಿ, ಕೂಸಿಗೊಂದೀಟ ಬಿಡತೀಯೋ ಇಲ್ಲೋ?” ಅಂದ.
“ರಸ ಕೊಟ್ಟರಾತ ಬಿಡs” ಎನ್ನುತ್ತ ಮತ್ತೆ ಮುಕ್ಕಿದಳು. ಇನ್ನು ತನಗೊಂದು ಮೂಳೆಯೂ ದಕ್ಕುವುದಿಲ್ಲವೆಂದು ಖಾತ್ರಿಯಾಗಿ ತಕ್ಷಣವೇ ಅವಳ ಕೈ ಹಿಡಿದು, “ಇನ್ನೊಂದು ತುತ್ತ ಬಾಯಿಗೆ ಹಾಕಿದರ ಕರಿಮಾಯಿ ಆಣಿ” ಅಂದ. ಅವಳೂ ಇವನಿಗೆ ಕರಿಮಾಯಿ ಆಣೆ ಹಾಕಿದಳು. ಒಗ್ಗರಣೆ ಹಾಕಿ ಪಲ್ಯ ಮಾಡುವ ತನಕ ಯಾರೂ ಮಾಂಸ ಮುಟ್ಟಕೂಡದೆಂದಾಯಿತು. ಆದರೆ ಆಣೆ ಪಾಲಿಸುವದರ ಬಗ್ಗೆ ಇಬ್ಬರಿಗೂ ನಂಬಿಕೆಯಿಲ್ಲ. ಆಣೆಯ ಭರಾಟೆಯಲ್ಲಿ ನಾಯೆಲ್ಯಾ ರಂಗಿಗಿಂತ ಮಾಂಸದ ಗಡಿಗೆಗೆ ಹೆಚ್ಚು ಸಮೀಪ ಬಂದಿದ್ದ! ಗೊತ್ತಾದೊಡನೆ ಅವನು ತಿನ್ನದ ಹಾಗೆ, ಆದರೆ ಪ್ರೀತಿಯೆಂದೆಂಬಂತೆ ಗಪ್ಪನೆ ತನ್ನ ನಳಿದೋಳ್ಗಳಿಂದ ನಾಯೆಲ್ಯಾನನ್ನು ಬಳಸಿ ಈಚಲುಮರಕ್ಕೆ ಕಾಡುಬಳ್ಳಿ ಸುತ್ತಿದಂತೆ ತಬ್ಬಿಕೊಂಡು ಕೂತಳು.
ಮಾಂಸ ಕುದಿಯಿತು. ನೀರು ಬಸಿದು ಒಂದೆಡೆಯಿಟ್ಟು ಒಗ್ಗರಣೆ ತಯಾರಿ ನಡೆದಾಗ ಬಾಗಿಲಲ್ಲಿದ್ದ ಮುನಿಯೆಲ್ಯಾ ಗುರ್ ಎಂದಿತು. ಯಾರೋ ಬಂದದ್ದು ಸ್ಪಷ್ಟವಿತ್ತು. ಹೋಗಿ ಕದ ತೆಗೆದು ನೋಡೆಂದು ಹೆಂಡತಿಗೆ ಹೇಳಿದ. ನೀನೇ ನೋಡೆಂದು ಅವಳು ಹೇಳಿದಳು. ನೀನು ತಾನು ಎನ್ನುವಷ್ಟರಲ್ಲಿ ಗೌಡ “ಮುನಿಯೆಲ್ಯಾ” ಎಂದು ಕೂಗಿದ್ದು ಕೇಳಿಸಿತು. ಗಡಬಡಿಸಿ, ಬಿಟ್ಟು ಓಡಿಹೋದರೆ ಈ ಹಾಳು ರಂಡೆ ಮುಗಿಸಿಬಿಡಬಹುದೆಂದು ತಕ್ಷಣ ಅವಳ ಕೈ ಹಿಡಿದುಕೊಂಡೆ ಹೋಗಿ ಬಾಗಿಲು ತೆಗೆದ. ಹೊರಗಾಗಲೆ ಮೂಡಲು ಹರಿಯತೊಡಗಿತ್ತು.
ಹೊರಗೆ ಗೌಡ ನಿಂತಿದ್ದ. ಗೌಡನೆದುರಿಗೆ ಹೆಂಡತಿಯನ್ನು ಹೇಗೆ ಹಿಡಿದಿರುತ್ತಾನೆ? ಬಿಟ್ಟ. ಎಡೆ ಹೊಡೆಯಬೇಕೆಂದು ತಾಕೀತು ಮಾಡಿ ಗೌಡ ಹೋದ. ಅತ್ತ ಗೌಡ ಹೋದ. ಇತ್ತ ನಾಯೆಲ್ಯಾ ಬಿಟ್ಟಬಾಣದ ಹಾಗೆ, ಅವಸರದಿಂದ ಒಳಗೆ ಬಂದು ನೋಡಿದರೆ ರಂಗಿ ಎಲ್ಲಾ ಮಾಂಸ ಕಬಳಿಸಿ ಕಟಲ್ ಕಟಲ್ ಎಂದು ಮೂಳೆ ಜಗಿಯುತ್ತಿದ್ದಳು. ನಾಯೆಲ್ಯಾನಿಗೆ ಅಳು ಬರುವಷ್ಟು ಕೋಪ ಬಂತು. ‘ಹಾದರಗಿತ್ತೇ’ ಎಂದು ಹಾರಿ ಅವಳ ತುರುಬಿಗೇ ಕೈ ಹಾಕಿ ಒದ್ದ. ಅವಳೋ ಛೇ, ಈ ಹತಭಾಗ್ಯನ ಅಂಗೀಗೆ ಕೈ ಹಾಕಿದಳು. ಸಿಟ್ಟಿನ ಭರದಲ್ಲಿ ಅಂಗಿ ಗಮನಿಸದೆ ರಪ್ಪೆಂದು ಹೊಡೆದ. ಅವಳು ಟರ್ರ ಎಂದು ಅಂಗಿ ಹರಿದಳು ಇನ್ನಷ್ಟು ಕೋಪ, ಇನ್ನಷ್ಟು ನಿರಾಶೆ, ಇನ್ನಷ್ಟು ನೋವಿನಿಂದ ಇನ್ನಷ್ಟು ಹೊಡೆದ. ಅವಳು ಅಂಗಿಯನ್ನು ಇನ್ನಷ್ಟು ಹರಿದು ತ್ಯಾಪೆ ಹಚ್ಚಲಿಕ್ಕೂ ಆಗದಂತೆ ಚಿಂದಿ ಚಿಂದಿ ಮಾಡಿ ಎಸೆದಳು!
ನ್ಯಾಯೆಲ್ಯಾ ಎರಡನೇ ಅಂಗಿಯಿಂದಲೂ ವಂಚಿತನಾದ ಈ ಕಥೆ ಕೇಳಿ ಜನ ನಕ್ಕರು. ಅಂದಿನಿಂದ ಅಂಗೀಯೆಲ್ಯಾ ಎಂದೂ ಧಾರಾಳವಾಗಿ ಇನ್ನೊಮ್ಮೆ ನಾಮಕರಣ ಮಾಡಿದರು. ಆಮೇಲೆ ಅವನಿಗೆ ಗೌಡನ ಅಂಗಿಗಳೇ ಗತಿ! ಗೌಡನ ದೊಡ್ಡ ಅಂಗಿ ಇವನ ಸಣಕಲು ಮೈಗೆ ಜೋತುಬೀಳುತ್ತಿತ್ತು. ಆದರೂ ಆತ ಬೇರೆ ಹೊಸ ಅಂಗಿ ಬಯಸಲಿಲ್ಲ. ಬರಬರುತ್ತ ಗೌಡನ ಜೊತೆಯಲ್ಲಿದ್ದಾಗ ಅಂಗೀಯೆಲ್ಯಾನಿಗೆ ಒಮ್ಮೊಮ್ಮೆ ಅಂದರೆ ಕುಡಿದಾಗ ಹೆಮ್ಮೆ ಕೂಡ ಅನಿಸುತ್ತಿತ್ತು. ಆಗೆಲ್ಲ ತನ್ನ ಹೆಂಡತಿ ರಂಗಿಗೆ ರಂಗಾಸಾನಿ ಎಂದು ಬಾಯಿತುಂಬ ಕರೆಯುತ್ತಿದ್ದ.

No comments:
Post a Comment